Nov 25, 2016

ಸದ್ ಮಾರ್ಗ

👉ಪರಿಪೂರ್ಣವಾಗಿ ಪರಿಶುದ್ಧ ಜೀವನ ನಡೆಸಲು ಕೆಲವು ಮಾರ್ಗಗಳು👇

👉ನಗರದಲ್ಲಿ 50ಲಕ್ಷ ಖಚು೯ ಮಾಡಿ ಮನೆ ಕಟ್ಟಿಸುವ
ಬದಲು 👇

ಹಳ್ಳಿಯಲ್ಲಿ ಕೃಷಿ ಭೂಮಿಯನ್ನು ಖರೀದಿಸಿ..👌

💛❤💛❤💛❤💛❤💛

👉30000 ರೂ ಖಚು೯ ಮಾಡಿ AC ಖರೀದಿಸುವ
ಬದಲು 👇

30 ರೂ ಖಚು೯ ಮಾಡಿ ಮನೆಯ ಆವರಣದಲ್ಲಿ ಸಸಿಯನ್ನು ನೆಡಿ..👌

💛❤💛❤💛❤💛❤💛

👉ಶುಗರ್, ಬಿಪಿ, ಹೃದಯ ಕಾಯಿಲೆಗಳಿಗಾಗಿ ದಿನಕ್ಕೆ 3 ಬಾರಿಯಂತೆ ತಿಂಗಳ ಔಷಧಿಗಳ ಮೆನು ಸಿದ್ಧಪಡಿಸುವ
ಬದಲಾಗಿ👇

ದಿನಕ್ಕೆ 3 ಹೊತ್ತು ಯಾವ ಯಾವ ಹಣ್ಣು ತರಕಾರಿಗಳನ್ನು ತಿನ್ನಬೇಕೆಂಬುವುದರ ಮೆನು ಸಿದ್ದಪಡಿಸಿಕೊಳ್ಳಿ..👇

💛❤💛❤💛❤💛❤💛

👉Week end ಅಂತ ವಾರದ ಕೊನೆಯ ಎರಡು ದಿನಗಳನ್ನು ನಗರದ ಬೀದಿ, ಮಾಲ್ ಗಳಲ್ಲಿ ಅಲೆಯುವ
ಬದಲು 👇

ತೋಟಗಳಲ್ಲಿನ ಗಿಡ-ಮರ, ಪಕ್ಷಿ- ಪ್ರಾಣಿಗಳ ಜೊತೆ ಕಳೆಯಿರಿ..👌

💛❤💛❤💛❤💛❤💛

👉ಪಿಜ್ಜಾ ಬಗ೯ರ್, ಬಟ್ಟೆಗಳಿಗಾಗಿ ನೀರಿನಂತೆ ಹಣ ಖಚು೯ ಮಾಡುವ
ಬದಲು👇

ಹೊಟ್ಟೆಗಾಗಿ ತಾಜಾ ಹಣ್ಣು ತರಕಾರಿಗಳನ್ನು ಸವಿಯಲು ಖಚು೯ ಮಾಡಿ👌

💛❤💛❤💛❤💛❤💛

👉ಸಲೂನ್ ಗಳಲ್ಲಿ ಮಸಾಜ್, ಸೌಂದಯ೯ಕರಣಕ್ಕಾಗಿ ಖಚು೯ ಮಾಡುವ
ಬದಲು👇

👉ಮಾನವೀಯತೆಯಿಂದ ಮನಸ್ಸನ್ನು ಪರಿಶುದ್ಧಗೊಳಿಸಿಕೊಳ್ಳಿ..👌

💛❤💛❤💛❤💛❤💛

👉ಲೇಟ್ ನೈಟ್ ಪಾಟಿ೯ಗಳಿಗಾಗಿ ಸಮಯ - ಹಣ ಕಳೆಯುವ
ಬದಲಾಗಿ 👇

ನಸುಕಿನ ಜಾವ ಹೊಲ-ಮನೆ  ಕೆಲಸಗಳನ್ನು ಮಾಡಿ..👌

💛❤💛❤💛❤💛❤💛

👉ಗರ್ಲ್ ಫ್ರೆಂಡ್ಸ್, ಬಾಯ್ ಫ್ರೆಂಡ್ಸ್ ಗೋಸ್ಕರ ರಾಶಿ ರಾಶಿ ಗಿಫ್ಟ್ ಪ್ರೆಸೆಂಟ್ ಮಾಡುವ
ಬದಲು👇

ಬಂಧುಗಳಿಗಾಗಿ, ಬಡಜನರಿಗಾಗಿ ಸಹಾಯ ಮಾಡಲು ಖಚು೯ ಮಾಡಿ..👌

💛❤💛❤💛❤💛❤💛

👉ಕ್ರಿಕೆಟ್ -ಸಿನೆಮಾ ತಾರೆಯರನ್ನು, ಪರಸ್ತ್ರೀ - ಪರಪುರುಷರನ್ನು ಮೋಹಿಸುವ
ಬದಲು👇

ನಿಮ್ಮ ಸ್ವಂತ ತಂದೆ - ತಾಯಿ,ಗಂಡ - ಹೆಂಡತಿ, ಬಂಧು- ಬಳಗ ಹಾಗೂ ಸ್ನೇಹಿತರನ್ನು ಪ್ರೀತಿಸಿ..👌👍

💛❤💛❤💛❤💛❤💛

👉ಮೇಲಿನ ಎಲ್ಲ ಆಧುನಿಕ ಆಡಂಬರ ಜೀವನ , ತೋರಿಕೆಯ ಜೀವನದಿಂದಾಗಿ ನಾವು ಹಣ - ಗುಣ ಮತ್ತು ಆರೋಗ್ಯ- ನೆಮ್ಮದಿಯನ್ನು ಕಳೆದುಕೊಳ್ಳುತ್ತೇವೆ. ಅಲ್ಲದೆ ನಮ್ಮ ಅರಿವಿಗೆ ಬಾರದಂತೆ ನಮ್ಮನ್ನಾಳುತ್ತಿರುವ ಜನರನ್ನು ಕುಬೇರರನ್ನಾಗಿಸುತ್ತಿದ್ದೇವೆ.

ಅದರ ಬದಲು👇

ನೈಜ ಜೀವನವನ್ನು ನಾವು ರೂಢಿಸಿಕೊಂಡಲ್ಲಿ ಸ್ವಸ್ಥ ಆರೋಗ್ಯ, ನೆಮ್ಮದಿಯ ಜೀವನವನ್ನು ನಮ್ಮದಾಗಿಸಿಕೊಂಡು, ರಕ್ತ ಹೀರುವ ಎಲ್ಲ ಪರೋಪ ಜೀವಿಗಳ ಬಾಧೆಯಿಂದ ಮುಕ್ತರಾಗಿ ನಾವೇ ಆರೋಗ್ಯ ಹಾಗೂ ಐಶ್ವಯ೯ವಂತರಾಗಿ  ಬದುಕಬಹುದು..👌👍

💛❤💛❤💛❤💛❤💛

ಈಗ👇

ನಿಮಗೆ ಯಾವ ರೀತಿಯ ಜೀವನ ಬೇಕೆಂಬುದನ್ನು ನೀವೇ ನಿಧ೯ರಿಸಿಕೊಂಡು ಬದುಕಿ..

ಏಕೆಂದರೆ👇

ನಾವು ಮಾಡುವ ಕಾರ್ಯಗಳು ಒಳ್ಳೆಯವೋ ಅಥವಾ ಕೆಟ್ಟವೋ ಆಗಿರಬಹುದು.. ಆದರೆ ಆ ಕಾರ್ಯಗಳಿಗೆ ತಕ್ಕಂಥ ಪ್ರತಿಫಲಗಳನ್ನು ದೇವರು ಮುಂದೊಂದು ದಿನ ಕೊಟ್ಟೇ ಕೊಡುತ್ತಾನೆ ಎಂಬುದನ್ನು ಮರೆಯದಿರಿ🙏

💛❤💛❤💛❤💛❤💛

ಒಳ್ಳೆ ಕಾರ್ಯಗಳನ್ನು ಮಾಡಿ👌 ಒಳ್ಳೆಯ ಪ್ರತಿಫಲಗಳನ್ನು ಸ್ವೀಕರಿಸಿ👍......🙏

💛❤💛❤💛❤💛❤💛

ಅಪ್ಪ ಅಂದರೆ

ನಾನು ಕೋಪದಿಂದ ಮನೆ ಬಿಟ್ಟು ಬಂದೆ. ಎಷ್ಟು ಕೋಪ ಬಂದಿತ್ತೆಂದರೆ ಅಪ್ಪನ ಶೂ ಹಾಕ್ಕೊಂಡು ಬಂದಿರುವುದು ಕೂಡ ಗೊತ್ತಾಗಲಿಲ್ಲ. ಮಗನಿಗೆ ಒಂದು ಬೈಕ್ ಕೊಡಿಸಲಾಗದವರು ಇಂಜಿನಿಯರ್ ಆಗಬೇಕು ಎಂದು ಕನಸು ಕಾಣುವುದು ಯಾಕೆ....?

ನಾನು ದೊಡ್ಡ ವ್ಯಕ್ತಿಯಾಗುವವರೆಗೂ ಮತ್ತೆ ಮನೆ ಹೋಗುವುದಿಲ್ಲ....
ನನಗೆ ಎಷ್ಟು ಕೋಪ ಬಂದಿದೆಯೆಂದರೆ ಎಂದೂ ಮುಟ್ಟದ  ಅಪ್ಪನ ಪಾರ್ಸ್'ನ್ನು ತಗೊಂಡುಬಂದೆ. ಅಮ್ಮನಿಗೆ ಕೂಡ ಗೊತ್ತಿಲ್ಲದ ಲೆಕ್ಕಗಳೆಲ್ಲ ಅದರಲ್ಲಿ ಇವೆ. ಇಂದು ಅವೆಲ್ಲವೂ ನನಗೆ ಗೊತ್ತಾಯಿತು.

ನಡೆಯುತ್ತಿದ್ದರೆ ಬೂಟ್'ಗಳಲ್ಲಿ ಏನೋ ಚುಚ್ಚಿದ ಹಾಗೆ ಆಗುತ್ತಿದೆ. ಅದರೂ ನನ್ನ ಕೋಪ ಅದನ್ನು ಲೆಕ್ಕಕ್ಕೆ ತೆಗೆದುಕೊಳ್ಳಲಿಲ್ಲ. ಬೂಟ್'ಗಳ ಒಳಗೆ ಒದ್ದೆಯಾಗ ಅನುಭವವಾಯಿತು. ಎತ್ತಿ ನೋಡಿದೆ ಬೂಟ್'ಗಳ ತಳದಲ್ಲಿ ರಂಧ್ರಗಳಾಗಿವೆ. ಹಾಗೆ ಕುಂಟುತ್ತ ಬಸ್ ನಿಲ್ದಾಣಕ್ಕೆ ಬಂದೆ.

ಒಂದು ಗಂಟೆ ತನಕ ಯಾವುದೇ ಬಸ್ಸು ಇಲ್ಲ ಎಂದು ತಿಳಿಯಿತು. ಸರಿ ಏನು ಮಾಡುವುದು. ಅಪ್ಪನ ಪಾರ್ಸ್'ನಲ್ಲಿ ಏನೇನು ಇದೆ ನೋಡೋಣ ಎಂದು ತೆಗೆದೆ. ಆಫೀಸಿನಲ್ಲಿ 40,000 ಸಾಲ ತೆಗೆದುಕೊಂಡ ರಶೀದಿ, Laptop ಬಿಲ್ಲು. ಆ Laptop ನನ್ನ ಟೇಬಲ್ ಮೇಲಿದೆ. ಅಂದರೆ ನನಗಾಗಿ ಕೊಡಿಸಿದ್ದು.

ಮತ್ತೆ ಅದರಲ್ಲಿ ಆಫೀಸ್'ಗೆ ಒಳ್ಳೆಯ ಬೂಟ್'ಗಳನ್ನು ಹಾಕಿಕೊಂಡು ಬರುವಂತೆ ಮೇನೇಜರ್ ಕೊಟ್ಟ ನೋಟೀಸ್ ಲೇಟರ್. ಹೌದು ಅಮ್ಮ ನಾಲ್ಕು ತಿಂಗಳಿಂದ ಹೇಳುತ್ತಿದ್ದರು ಹೊಸ ಶೂ ತೆಗೆದುಕೊಳ್ಳಿ ಎಂದು. ಅಪ್ಪ ಇನ್ನೂ ಆರು ತಿಂಗಳು ಬರುತ್ತವೆ ಎನ್ನುತ್ತಿದ್ದ.

'ನಮ್ಮ ಈ Exchange ಮೇಳದಲ್ಲಿ ಹಳೆಯ ಸ್ಕೂಟರ್ ಕೊಟ್ಟು ಹೊಸ ಬೈಕ್ ಪಡೆಯಿರಿ' ಎಂಬ ಭಿತ್ತಿಪತ್ರ ಕಾಣಿಸಿತ್ತು.

ಹೌದು! ನಾನು ಮನೆ ಬಿಟ್ಟು ಬರುವಾಗ ಅಪ್ಪನ ಸ್ಕೂಟಾರ್ ಕಾಣಿಸುತ್ತಿಲ್ಲವಲ್ಲ....?

ನನ್ನ ಕಣ್ಣುಗಳು ಒದ್ದೆಯಾದವು. ತಕ್ಷಣವೇ ಮನೆ ಕಡೆ ಓಡತೊಡಗಿದೆ.....

ಈಗ ಬೂಟ್'ಗಳಿಂದ ನೋವಾಗುತ್ತಿಲ್ಲ....

ಮನೆಯಲ್ಲಿ ಅಪ್ಪ ಇಲ್ಲ... ಸ್ಕೂಟರ್ ಇಲ್ಲ... ನನಗೆ ಅರ್ಥವಾಯಿತು. ತಕ್ಷಣ Exchange ಆಪರ್ ನೀಡುವ ಸ್ಥಳಕ್ಕೆ ಓಡಿಬಂದೆ. ಅಪ್ಪ ಅಲ್ಲಿದ್ದಾರೆ....!

ದುಃಖವನ್ನು ತಡೆದುಕೊಳ್ಳಲಾಗಲಿಲ್ಲ. ಅಪ್ಪನನ್ನು ಗಟ್ಟಿಯಾಗಿ ತಬ್ಬಿಕೊಂಡು ಜೋರಾಗಿ ಅಳಲು ಆರಂಭಿಸಿದೆ....!

" ಬೇಡ ಅಪ್ಪ...! ನನಗೆ ಬೈಕ್ ಬೇಡ....!!ಅಂದೆ

ಆವಾಗ್ಲೆ ಗೊತ್ತಾಗಿದ್ದು  ಹೆತ್ತವರ ನೋವು,ಕಷ್ಟ,ಪ್ರೀತಿ ಎಂತದ್ದು ಅಂತ.

ನಾವು ಪ್ರೀತಿಸಬೇಕಾಗಿದ್ದು ಇಷ್ಟ ಪಡಬೇಕಾಗಿದ್ದು ಶೋಕಿ ತರುವಂತ ವಸ್ತುಗಳನ್ನಲ್ಲ
ನಮ್ಮ ಜೀವನವನ್ನ ಶೋಬಿಸುವ ಹೆತ್ತವರನ್ನ.

ಇದ್ದಾಗ ಕಡೆಗಣಿಸಿ ಸತ್ತಾಗ ಅತ್ತರೆ ಮತ್ತೆ ಹುಟ್ಟಿ ಬರುವವರೇ ಹೆತ್ತವರು.
ಯೋಚನೆ ಮಾಡಿ,
ಇಂತಹ ಕಥೆಗಳನ್ನು ಮಕ್ಕಳಿಗೆ ಹೇಳಿ ವ್ಯಕ್ತಿತ್ವ ಬೆಳೆಸಿ:
One of the best msgs that i hv read n plz read and share without fail.

ಜನನ ಮರಣ ಗಳ ನಡುವೆ

*ಹುಟ್ಟು:* ನಾವು ಕೇಳದೇ ಸಿಗುವ ವರ(ಶಾಪ)

*ಸಾವು:* ನಾವು ಹೇಳದೇ ಹೋಗುವ ಜಾಗ

*ಬಾಲ್ಯ:* ಮೈಮರೆತು ಆಡುವ ಸ್ವರ್ಗ.

*ಯೌವನ:* ಅರಿವಿದ್ದರೂ ಅರಿಯದ ಮಾಯೆ.

*ಮುಪ್ಪು:* ಕಡೆಯ ಆಟ.

*ಸ್ನೇಹ:* ಶಾಶ್ವತವಾಗಿ ಉಳಿಯೋ ಬಂಧ.

*ಪ್ರೀತಿ:* ಪ್ರಾಣಕ್ಕೆ ಹಿತವಾದ ಅನುಬಂಧ.

*ಪ್ರೇಮ:* ತ್ಯಾಗಕ್ಕೆ ಸ್ಪೂರ್ತಿ.

*ಕರುಣೆ:* ಕಾಣುವ ದೇವರು.

*ಮಮತೆ:* ಕರುಳಿನ ಬಳ್ಳಿ.

*ದ್ವೇಷ:* ಉರಿಯುವ ಕೊಳ್ಳಿ.

*ತ್ಯಾಗ:* ದೀಪ.

*ಉಸಿರು:* ಮೌನದಲೆ ಜೊತೆಗಿರುವ ಗೆಳೆಯ.

*ಹ್ರದಯ:* ಎಚ್ಚರಿಕೆ ಗಂಟೆ.

*ಕಣ್ಣು:* ಸ್ರಷ್ಟಿಯ ಕನ್ನಡಿ.

*ಮಾತು:* ಬೇಸರ ನೀಗುವ ವಿದ್ಯೆ.

*ಮೌನ:* ಭಾಷೆಗೂ ನಿಲುಕದ ಭಾವ.

*ಕಣ್ಣೀರು:* ಅಸ್ತ್ರ

*ನೋವು:* ಅಸಹಾಯಕತೆ

*ನಗು:* ಔಷಧಿ.

*ಹಣ:* ಅವಶ್ಯಕತೆ.

*ಗುಣ:* ಆಸ್ತಿ.

*ಕಲೆ:* ಜ್ಞಾನ.

*ಧರ್ಮ:* ಬುನಾದಿ.

*ಕರ್ಮ:* ಕಾಣದಾ ಕೈ ಆಟ.

*ಕಾಯಕ:* ದೇಹ, ಮನಸಿಗೆ ಮಿತ್ರ.

*ಸಂಸ್ಕೃತಿ:* ನೆಲೆ

*ಸಾಧನೆ:* ಜೀವಕ್ಕೆ ಜೀವನಕ್ಕೆ ಬೆಲೆ.

Nov 7, 2016

Om ಓಂ ಮಂತ್ರದ ಪ್ರಯೋಜನ

*OM......OM......OM*

*THE ELIXIR OF LIFE*

*"ಓಂ"* ಮಂತ್ರ ಪಠಿಸಿ,
ಸರ್ವ ರೋಗ ನಿವಾರಿಸಿ

ಹಿಂದೂ ಧರ್ಮದ ಅನುಸಾರ *ಓಂ* ಗೆ ತನ್ನದೇ ಆದ ಮಹತ್ವ ಇದೆ. *ಓಂ* ಉಚ್ಛಾರ ಮಾಡದೇ ಯಾವುದೇ ಪೂಜೆಗಳು ಸಂಪೂರ್ಣವಾಗುವುದೇ ಇಲ್ಲ. ಮಂತ್ರಗಳಲ್ಲಿ *ಓಂ* ಉಚ್ಛಾರ ಮಾಡದೇ ಮಂತ್ರ ಹೇಗೆ ಪೂರ್ಣಗೊಳ್ಳುವುದು..? ಆದರೆ *'ಓಂ'*ಗೆ ಕೇವಲ ಧಾರ್ಮಿಕ ಮಹತ್ವ ಅಲ್ಲದೇ ಶಾರೀರಿಕ ಮಹತ್ವ ಕೂಡಾ ಇದೆ ಎಂಬುದು ನಿಮಗೆ ತಿಳಿದಿದೆಯೇ.?

ಇಂದು ನಾವು ನಿಮಗೆ
*'ಓಂ'* ನಿಂದ ಉಂಟಾಗುವ ರಹಸ್ಯಮಯ ಶಾರೀರಿಕ ಉಪಯೋಗಗಳನ್ನು ಹೇಳುತ್ತೇವೆ. ಇವುಗಳನ್ನು ನಿಮ್ಮದಾಗಿಸಿಕೊಂಡರೆ ಸರ್ವ ರೋಗಗಳು ನಿಯಂತ್ರಣ ಹೊಂದುತ್ತದೆ.

*'ಓಂ'* ಮತ್ತು *ಥೈರಾಯ್ಡ್‌*:
'ಓಂ' ನ ಉಚ್ಛಾರಣೆ ಮಾಡುವುದರಿಂದ ಗಂಟಲಿನಲ್ಲಿ ಕಂಪನ ಉಂಟಾಗುತ್ತದೆ. ಇದರಿಂದ ಥೈರಾಯ್ಡ್‌ ಗ್ರಂಥಿಗಳ ಮೇಲೆ ಸಕಾರಾತ್ಮಕ ಪ್ರಭಾವ ಉಂಟಾಗುತ್ತದೆ.

*ಓಂ* ಮತ್ತು *ಭಯ* : ನಿಮಗೆ ಭಯವಾಗುತ್ತಿದ್ದರೆ ಕಣ್ಣನ್ನು ಮುಚ್ಚಿಕೊಂಡು ಐದು ಬಾರಿ ದೀರ್ಘ ಶ್ವಾಸ ತೆಗೆದುಕೊಂಡು 'ಓಂ' ಎಂದು ಉಚ್ಛರಿಸಿ.

*ಓಂ* ಮತ್ತು  *ಒತ್ತಡ* :
ಇದು ಶರೀರದ ವಿಷ ಅಂಶಗಳನ್ನು ದೂರ ಮಾಡುತ್ತದೆ.
ಇದನ್ನು ಉಚ್ಛಾರ ಮಾಡುವುದರಿಂದ ಒತ್ತಡ ಕಡಿಮೆಯಾಗುತ್ತದೆ.

*ಓಂ* ಮತ್ತು *ರಕ್ತ ಸಂಚಾರ* :  ಹೃದಯವನ್ನು ಆರೋಗ್ಯವಾಗಿಡಲು ಸಹಕಾರಿಯಾಗಿದೆ. 'ಓಂ' ಎಂದು ಹೇಳುವುದರಿಂದ ರಕ್ತ ಸಂಚಾರ ಸುಗಮವಾಗುತ್ತದೆ.

*ಓಂ* ಮತ್ತು *ಪಚನ ಕ್ರಿಯೆ* : ಇದನ್ನು ಉಚ್ಛಾರ ಮಾಡುವುದರಿಂದ ಪಚನ ಕ್ರಿಯೆ ಸರಿಯಾಗುತ್ತದೆ.

*'ಓಂ'* ಮತ್ತು *ಸ್ಫೂರ್ತಿ* : ಇದರಿಂದ ಶರೀರದಲ್ಲಿ ಯುವಾವಸ್ಥೆಯ ಸ್ಫೂರ್ತಿ ಹರಿದಾಡುತ್ತದೆ.

*ಓಂ* ಮತ್ತು *ಸುಸ್ತು* : ಆಯಾಸವನ್ನು ದೂರ ಮಾಡಲು ಸುಲಭ ಉಪಾಯ 'ಓಂ' ಉಚ್ಛಾರ ಮಾಡುವುದು.

*ಓಂ* ಮತ್ತು *ನಿದ್ರೆ* : ಸರಿಯಾಗಿ ನಿದ್ರೆ ಬರದೇ ಇದ್ದ ಸಂದರ್ಭದಲ್ಲಿ ಓಂ ಎಂದು ಪಠಣ ಮಾಡಿ. ಇದರಿಂದ ಮನಸ್ಸು ಶಾಂತವಾಗಿ ನಿದ್ರೆ ಚೆನ್ನಾಗಿ ಬರುತ್ತದೆ.

*ಓಂ* ಮತ್ತು *ಶ್ವಾಸಕೋಶ* : 'ಓಂ' ಉಚ್ಛಾರಣೆ ಶ್ವಾಸಕೋಶದ ತೊಂದರೆ ಕಡಿಮೆಯಾಗುತ್ತದೆ.

*ಓಂ* ಮತ್ತು *ಬೆನ್ನೆಲುಬು* : 'ಓಂ' ಉಚ್ಛಾರ ಮಾಡುವುದರಿಂದ ಉಂಟಾಗುವ ಕಂಪನದಿಂದ ಬೆನ್ನೆಲುಬು ಗಟ್ಟಿಯಾಗುತ್ತದೆ ಹಾಗೂ ಮುಂದೆ ಇದರಿಂದ ಯಾವುದೇ ಸಮಸ್ಯೆ ಕಾಣಿಸುವುದಿಲ್ಲ..

Nov 5, 2016

ರೈತನತ್ತ ಮನಸು

ಈ ಸಂದೇಶದ
ರಚನಕಾರರಿಗೆ ಧನ್ಯವಾದಗಳು

  ವಿದ್ಯೆ ಕಲಿತವರು ವಿನಯವಂತರಾಗಬೇಕ್ಕಿತ್ತು
ಆದರೆ ಹಾಗಾಗಲ್ಲಿಲ್ಲ,

ಹಣವಂತರು ದಾನಿಗಳಾಗಬೇಕ್ಕಿತ್ತು, ಅದರೆ ಹಾಗಾಗಲ್ಲಿಲ್ಲ,

ಬಹುಜನರು ಒಬ್ಬ ಗುರುಮಾರ್ಗದರ್ಶನದಲ್ಲಿ ಹೊಗಬೇಕ್ಕಿತ್ತು ,
ಆದರೆ ಅದೂ ಹಾಗಾಗಲ್ಲಿಲ್ಲ,
ಮತ್ತೆಲ್ಲಿ
ಪ್ರಬುದ್ಧಭಾರತದ ಕನಸು ಮಿತ್ರರೇ,

ಹಿಂದೆ ಒಬ್ಬ ಗುರುವಿರಲಿ,
ಮುಂದೆ ಗುರಿ ಇರಲಿ,
ನಡುವೆ
ನೀವು ದಾರಿ ತಪ್ಪುವುದಿಲ್ಲ,
ಗುರು, ಗುರಿ ಇಲ್ಲದೆ ಇದ್ದರೆ
ನಿಮ್ಮ ಶ್ರಮ
ಇನ್ನೊಂದೆರಡು ಸಾವಿರ ವರ್ಷಗಳು ಬೇಕಾಗಬಹುದು
ಸಮಾನತೆಯ ಸಮಾಜ
ನಿರ್ಮಾಣ ವಾಗಲು ಅಲ್ಲವೇ?
         
ನನ್ನ ಸಣ್ಣ ನೋವು,
ಮತ್ತು ಬಹುಕಾಲದ ಹತಾಶೆ.......

ನಿ೦ಬೆಹಣ್ಣು ಮಾರುವ ಅಜ್ಜಿಯ ಬಳಿ ಚೌಕಾಸಿ ಮಾಡುವಿರಿ,

ಸೊಪ್ಪಿನ ಅಜ್ಜನ ಬಳಿ ಕೊಸರಾಡುವಿರಿ,

ಕಡಲೆಕಾಯಿ ಮಾರುವವನ ಹತ್ತಿರ ಜಗಳವಾಡುವಿರಿ,

ಹಣ್ಣು
ಮಾರುವವನ ಹತ್ತಿರ
ಪೌರುಷ ತೋರುವಿರಿ ,

ಎಳನೀರಿನವನ ಬಳಿ ಜುಗ್ಗುತನ ತೋರುವಿರಿ,

ಹೂವಿನವರ ಹತ್ತಿರ
ನಿಮ್ಮೆಲ್ಲಾ ಜಿಪುಣತನ ಖರ್ಚುಮಾಡುವಿರಿ,

ಗೊತ್ತೇ ನಿಮಗೆ
ಭತ್ತ ಬೆಳೆಯುವವನ ಕಷ್ಟ,

ಗೊತ್ತೇ ನಿಮಗೆ ಭತ್ತ ಬೆಳೆಯಲು ಎಷ್ಟು ದಿನ ಬೇಕೆ೦ದು,

ಗೊತ್ತೇ ನಿಮಗೆ ಅದು ಫಸಲಾಗಲು ಎಷ್ಟು ಜನರು ಶ್ರಮಪಡಬೇಕೆ೦ದು,

ಗೊತ್ತೇ ನಿಮಗೆ ಅದಕ್ಕೆ ತಗಲುವ ಖರ್ಚು ಎಷ್ಟೆಂದು,

ಗೊತ್ತೇ ನಿಮಗೆ ಅದರ ಆರೈಕೆ ಎಷ್ಟು ಕಷ್ಟವೆ೦ದು,

ಗೊತ್ತೇ ನಿಮಗೆ ಅದರ ಕಟಾವಿನಲ್ಲಿ ಸುರಿಯುವ ಬೆವರು ಎಷ್ಟೆಂದು

ಗೊತ್ತೇ ನಿಮಗೆ ಅದರ ಸಾಗಾಣಿಕೆಯ ಕರ್ಮಕಾ೦ಡ,

ಗೊತ್ತೇ ನಿಮಗೆ ಅದರಲ್ಲಿ ಆಗುವ
ನಷ್ಟ ( Waste ) ಎಷ್ಟೆಂದು,

ಗೊತ್ತೇ ನಿಮಗೆ ಇಷ್ಟಾದರೂ
ಅದಕ್ಕೆ ಸಿಗುವ ಪ್ರತಿಫಲದ ನೋವು,

ನಿಮ್ಮ ಮನೆಯಲ್ಲಿ ಬೇಯುವ ಅನ್ನ ಕಂಪ್ಯೂಟರ್  ನಲ್ಲಿ ತಯಾರಾದದ್ದಲ್ಲ,

ನೀವು ಊಟಮಾಡುವ ಅಕ್ಕಿ ಇಂಟರ್ನೆಟ್  ನಲ್ಲಿ ಬೆಳೆದದ್ದಲ್ಲ,

ಅದು ರೈತರ
ಬೆವರ ಹನಿಗಳಿ೦ದ ಬಸಿದದ್ದು,

ತಾಕತ್ತಿದ್ದರೆ
Pizza, Burger,
ಹೋಟೆಲ್ ಗಳಲ್ಲಿ ಚೌಕಾಸಿ ಮಾಡಿ,

ಧೈರ್ಯವಿದ್ದರೆ ಶಾಪಿ೦ಗ್ ಮಾಲ್ ಗಳಲ್ಲಿ ಕೊಸರಾಡಿ,

ಶಕ್ತಿಯಿದ್ದರೆ
Multiplex Theater
ಟಿಕೆಟ್ ಕೌ೦ಟರ್ ನಲ್ಲಿ ಜಗಳವಾಡಿ,
ಕ್ಷಮಿಸಿ ಇದು ಯಾರ ವಿರುದ್ಧದ ದ್ವೇಷವೂ ಅಲ್ಲ,
ನಿಮ್ಮ ಮನಸ್ಸಿನ ಜಾಗೃತಿಗಾಗಿ,
ನಿಮ್ಮ ಗಮನ ಸೆಳೆಯಲು,
ರೈತರ ಶ್ರಮವನ್ನು ನಿಮಗೆ ನೆನಪಿಸಲು. ...

ಒಂದು ಚಿಕ್ಕ ಚಾಕಲೇಟ್ಗೇ 
MRP ಬೆಲೆಯಿದೆ
ಆದರೆ ರೈತ ಬೆಳೆದ ಬೆಳೆಗೆ ಕೆಲವೊಮ್ಮೆ ಶ್ರಮಕ್ಕೆ ಬೆಲೆಯಿಲ್ಲ..
ಪ್ರಬುದ್ಧ ಮನಸ್ಸು,
ಪ್ರಬುದ್ಧ ಸಮಾಜ,
ಪ್ರಬುದ್ಧ ರಾಜ್ಯ,
ಪ್ರಬುದ್ಧ ಭಾರತ. !!!!!


ರೈತರು ನಾಟೌಟ್ ಆಗಿ ನಿಲ್ಲಬೇಕು....

ಬಂಧುಗಳೇ...
1ಕ್ಷಣ ಇಲ್ಲಿ ನೋಡಿ..
ವಿಕೆಟ್ ಬಿದ್ರೆ ದೇಶ ಸೋಲುತ್ತೇ..ಎಂದು ಭಯಬೀಳುವ ದೇಶಭಕ್ತ
ದೇಶಕ್ಕೆ ಅನ್ನ ನೀಡುವ ದೇಹಗಳೆಷ್ಟೋ ಬೀಳುತ್ತಿದ್ದರೂ ಗಮನ ಕೊಟ್ಟೆಯ ದೇಶಭಕ್ತ?
🌱
ಇಷ್ಟ ವಾದ ಕ್ರಿಕೆಟರ್ ನೂರು ರನ್ ಮಾಡಲಿ ಎಂದು ದೇವರನ್ನು ಮುಗಿದಂತೆ
ನಿನಗೆ ಗೊತ್ತಿರುವ ರೈತ ನೂರು ಮೂಟೆಗಳ ಬೆಳೆ ಬೆಳೆಯಬೇಂದು ಮನಸಾರೆ ಯಾವಗಲಾದರೂ ಬೇಡಿಕೊಂಡಿದ್ದೀಯ ದೇಶಭಕ್ತ?
🌱
ಮೂರು ಗಂಟೆ ಬ್ಯಾಟ್ ಹಿಡಿದು ಆಡಿದಾತನು ದೇವರಾದರೇ..
ನಿನಗೆ ಜೀವನವೆಲ್ಲ ಅನ್ನ ನೀಡುವ ರೈತನನ್ನು ಏನೆನ್ನುವೇ?
🌱
ನಿನಗೆ ಎಲ್ಲಾ ಸ್ಟೇಡಿಯಂಗಳ ಪಿಚ್ ಹೇಗಿರುತ್ತೆ ಎನ್ನುವುದು ಗೊತ್ತು.
ನಿನ್ನ ಊರಲ್ಲಿ ಮಾರ್ಕೆಟ್ ಯಾರ್ಡ ಎಲ್ಲಿದಿಯೋ..ಎಂತಹ ಪರಿಸ್ಥಿತಿಯಲ್ಲಿದಿಯೋ..ನಿನಗೆ ಗೊತ್ತ ದೇಶಭಕ್ತ?
🌱
ಅನ್ನ ತಿನ್ನುತ್ತಾ...
ಪಾಕಿಸ್ತಾನ ಟೀಂ  ನಿನ್ನ ದೇಶಕ್ಕೆ ಬರಲಾ.. ಅಥವಾ ಬೇಡವ ನಿರ್ಧಾರ ತೆಗೆದುಕೊಳ್ಳುತ್ತೀಯ...
ನಿನ್ನ ಕೈಯಲ್ಲಿರುವುದು ಸ್ವದೇಶಿ ಅಕ್ಕಿನೋ ವಿದೇಶಿ ಅಕ್ಕಿನೋ ನಿನಗೆ ಗೊತ್ತಾ ದೇಶಭಕ್ತ?
🌱
ಯಾರು ಯಾವಾಗ ಎಷ್ಟು ಸ್ಕೋರ್ ಮಾಡಿದ್ರು ಎಂದು ಗೊತ್ತಿರುವ ನಿಂಗೆ...
ದಿನ ಎಲ್ಲೇಲ್ಲಿ ಎಷ್ಟು ರೈತರು ಸಾಯುತ್ತಿದ್ದಾರೆ ಗೊತ್ತಾ ದೇಶಭಕ್ತ?
🌱
ಕಾಮೆಂಟ್ರಿ ಕೇಳುತ್ತಾ ಟಿವಿ ಯೊಳಗೇ...ಹೋಗುವ ನೀನು
ಯಾವಾಗಲಾದರೂ ರೈತರ ಬಗ್ಗೆ ಚರ್ಚೆ ಕಾರ್ಯಕ್ರಮ ನೋಡಿದಿಯಾ ದೇಶಭಕ್ತ?
🌱
ಹನ್ನೊಂದು ಜನ ಆಡುವ ಆಟಕ್ಕೋಸ್ಕರ ಲಕ್ಷ ಲಕ್ಷ ಜನ ಒಂದಾಗುತ್ತೇವೆ..
ಕೋಟಿ ಜನರ ಹಸಿವನ್ನು ನೀಗಿಸುವ
ರೈತರಿಗೆ ಏನ್ಮಾಮಾಡ್ತಿದಿವಿ ದೇಶಭಕ್ತ?
🌱
ಇಂಡಿಯಾ ಗೆಲ್ಲಿಸುವವರ ಜೊತೆಗೆ
ಬದುಕಿಸುವವರ ಬಗ್ಗೆ ಕಾಳಜಿಯಿರಲಿ ದೇಶಭಕ್ತ..
🌱
ಇಂಡಿಯಾ ಗೆಲ್ಲಬೇಕಾಗಿರುವುದು ಆಟದ ಮೈದಾನದಲಲ್ಲ...ಅಚ್ಚ ಹಸಿರಿನ ಹೊಲದ ಮೈದಾನದಲ್ಲಿ...
ಅದಕ್ಕೇ ರೈತ ನಾಟೌಟ್ ಆಗಿ ನಿಲ್ಲಬೇಕು....ನಾವೆಲ್ಲರೂ ಅವರ ಏಳ್ಗೆ ಬಯಸೋಣ......
ಸ್ನೇಹಿತರೇ
🌿🌿🌿🌿🌿🌿
Plz share this...

Nov 2, 2016

ರಾಮನಗರ ಜಿಲ್ಲೆ

ರಾಮನಗರ ಜಿಲ್ಲೆಯ ವಿಶೇಷತೆಗಳು

1) ಕರ್ನಾಟಕದ ರೇಷ್ಮೆನಗರಿ ಎಂದು ಕರೆಯಲ್ಪಡುವ ಜಿಲ್ಲೆ ನಮ್ಮ ರಾಮನಗರ.

2) ಕರ್ನಾಟಕದ 2ನೇ ಮುಖ್ಯಮಂತ್ರಿ ಹಾಗೂ ವಿಧಾನಸೌದದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ತವರು ರಾಮನಗರ.

3) ರಾಮನಗರ ಜಿಲ್ಲೆಯ ಮಾಗಡಿಯ ನಾಡಪ್ರಭು ಕೆಂಪೇಗೌಡರು ವಿಶ್ವವಿಖ್ಯಾತ ಬೆಂಗಳೂರಿನ ಸ್ಥಾಪಕರು.

4) ಬೊಂಬೆಗಳ ನಗರಿ ಚನ್ನಪಟ್ಟಣದ ಬೊಂಬೆಗಳು ವಿಶ್ವಪ್ರಸಿದ್ಧವಾಗಿವೆ.

5) ಅಮೇರಿಕಾದ ಶ್ವೇತಭವನವನ್ನು ಚನ್ನಪಟ್ಟಣದ ಬೊಂಬೆಗಳು ಅಲಂಕರಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ.

6) ಗಂಗ ವಂಶದ ರಾಜರ 4 ಪ್ರಮುಖವಾದ ರಾಜಧಾನಿಗಳಲ್ಲಿ ಚನ್ನಪಟ್ಟಣ ತಾಲ್ಲೂಕಿನ ಮಾಕುಂದ ಎಂಬ ಊರು ಕೂಡ ಒಂದು.

7) ಭಾರತೀಯ ಚಿತ್ರರಂಗದ ಮೈಲುಗಲ್ಲೆನಿಸಿದ ಹಿಂದಿಯ ಖ್ಯಾತ ಶೋಲೆ ಚಿತ್ರ ರಾಮನಗರದ ರಾಮದೇವರ ಬೆಟ್ಟದಲ್ಲಿ ಚಿತ್ರೀಕರಣಗೊಂಡು ಲೋಕವಿಖ್ಯಾತವಾಯಿತು.

8) ರಾಮನಗರವು ಜಾನಪದ ಕಲೆಗಳಿಗೆ ಹೆಸರುವಾಸಿಯಾದ ಜಿಲ್ಲೆ.ಚನ್ನಪಟ್ಟಣ ತಾಲ್ಲೂಕಿನ ಸಮೀಪ ಪ್ರಸಿದ್ಧವಾದ ಜಾನಪದ ಲೋಕವಿದೆ.

9) ಜಾನಪದ ಗಾಯನದಲ್ಲಿ ರಾಮನಗರದ ಬಾನಂದೂರು ಕೆಂಪಯ್ಯನವರು ಹೆಸರುವಾಸಿಯಾಗಿದ್ದರು.

10) ಕಾವೇರಿ ಮತ್ತು ಅರ್ಕಾವತಿ ನದಿಗಳ ಪವಿತ್ರ ಸಂಗಮವಾಗುವ ಸ್ಥಳ ಕನಕಪುರದ ಸಂಗಮ ಎಂಬ ಊರಿನಲ್ಲಿದೆ.

11) ದಕ್ಷಿಣ ಭಾರತದ ಪ್ರಖ್ಯಾತ ನಟಿಯಾದ ಪದ್ಮಭೂಷಣ ಡಾ!!.ಬಿ.ಸರೋಜಾದೇವಿಯವರು ಚನ್ನಪಟ್ಟಣದ ದಶವಾರ ಎಂಬ ಗ್ರಾಮದವರು.

12) ಕನ್ನಡನಾಡಿನ ಖ್ಯಾತ ಸಾಹಿತಿಗಳಾದ ನಾಡೋಜ ದೇ.ಜವರೇಗೌಡರ ಜನ್ಮಸ್ಥಳ ಚನ್ನಪಟ್ಟಣದ ಬಳಿಯ ಚಕ್ಕೆರೆ ಎಂಬ ಊರು.

13) ವಿಶ್ವದಲ್ಲೇ ಇತಿಹಾಸ ಪ್ರಸಿದ್ಧ ಸುಗ್ರೀವನ ದೇವಾಲಯ ಹೊಂದಿರುವ ಸ್ಥಳ‌ ಚನ್ನಪಟ್ಟಣ.

14) ಗಿಡಮರಗಳನ್ನೇ ತನ್ನ ಮಕ್ಕಳೆಂದು ಭಾವಿಸಿ, ಅವುಗಳನ್ನು ಸಂರಕ್ಷಿಸಿ ಬೆಳೆಸಿ ದೇಶಕ್ಕೇ ಆದರ್ಶ ಮಹಿಳೆಯಾದ ಸಾಲುಮರದ ತಿಮ್ಮಕ್ಕ ನವರ ಊರು ಮಾಗಡಿ.

15) ವಿಷ್ಣುಸಹಸ್ರ ನಾಮದಲ್ಲಿ ಉಲ್ಲೇಖವಾಗಿರುವ ಅಪ್ರಮೇಯ ಎಂಬ ನಾಮದ ವಿಶ್ವದಲ್ಲೇ ಏಕೈಕ ದೇವಾಲಯವಿರುವುದು ಚನ್ನಪಟ್ಟಣದ ಸಮೀಪದ ದೊಡ್ಡ ಮಳೂರು ಎಂಬ ಗ್ರಾಮದಲ್ಲಿ ಮಾತ್ರ.

16) ಕರ್ನಾಟಕ ರತ್ನ, ಪದ್ಮಭೂಷಣ ಸಿದ್ಧಗಂಗಾ ಶ್ರೀಗಳಾದ ಡಾ!!.ಶಿವಕುಮಾರ ಮಹಾಸ್ವಾಮಿಗಳ ಜನ್ಮಸ್ಥಳ ಮಾಗಡಿಯ ಸಮೀಪದ ವೀರಾಪುರ      ಗ್ರಾಮ

17) ಪದ್ಮಭೂಷಣ ಬಾಲಗಂಗಾಧರನಾಥ ಸ್ವಾಮಿಗಳ ಜನ್ಮಸ್ಥಳ ಬಿಡದಿ ಸಮೀಪದ ಬಾನಂದೂರು.

[18) ಭಾರತ ದೇಶದಲ್ಲಿ ಉದ್ದ ಕೊಕ್ಕಿನ ಹದ್ದುಗಳು ಅತಿ ಹೆಚ್ಚು ಕಂಡುಬರುವುದು ರಾಮನಗರದ ರಾಮದೇವರ ಬೆಟ್ಟದಲ್ಲಿ ಮಾತ್ರ.

19) ದಕ್ಷಿಣ ಭಾರತದಲ್ಲಿ ಅತಿದೊಡ್ಡ ಏಕಶಿಲಾ ಬೆಟ್ಟ ಇರುವುದು ರಾಮನಗರದಲ್ಲಿ.

[20) ಮಾಧ್ವ ಪರಂಪರೆಯಲ್ಲಿ ಬಂದ ಯತಿಗಳಾದ ಬ್ರಹ್ಮಣ್ಯತೀರ್ಥರ ಬೃಂದಾವನ ಚನ್ನಪಟ್ಟಣದ ಅಬ್ಬೂರು ಗ್ರಾಮದಲ್ಲಿ ಇದೆ.

[21) ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ ವ್ಯಾಸರಾಯರು ಚನ್ನಪಟ್ಟಣದ ದೇವರಹೊಸಹಳ್ಳಿಯಲ್ಲಿ ಮುಖ್ಯಪ್ರಾಣ ಹನುಮಂತನ ವಿಗ್ರಹ   ಸ್ಥಾಪಿಸಿದ್ದಾರೆ.

22) ಪುರಂದರದಾಸರು  ಚನ್ನಪಟ್ಟಣದ ಅಪ್ರಮೇಯ ದೇವಾಲಯದಲ್ಲಿನ ಅಂಬೆಗಾಲು ಕೃಷ್ಣನ ಮೂರ್ತಿಯನ್ನು ನೋಡಿ ಪ್ರಸಿದ್ಧ ಕೀರ್ತನೆಯಾದ 'ಆಡಿಸಿದಳು ಯಶೋಧೆ ಸುಗುಣಾಂತರಂಗನ ಅಪ್ರಮೇಯನ` ಎಂಬ ಗೀತೆ ರಚಿಸಿದ್ದಾರೆ.

23) ಪ್ರತಿಷ್ಠಿತ ಪೋಲೀಸ್ ತರಬೇತಿ ಶಾಲೆ( PTS ) ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿದೆ.

25) 1999ನೇ ಇಸವಿಯಲ್ಲಿ ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಸಾಹಿತಿ S.L.ಭೈರಪ್ಪನವರು ಅಧ್ಯಕ್ಷರಾಗಿದ್ದರು.

24) ಭಾರತ ದೇಶದಲ್ಲಿ ಕಪ್ಪುಬಣ್ಣದ  ಗ್ರಾನೈಟ್ ಶಿಲೆಗೆ ಕನಕಪುರ ಪ್ರಸಿದ್ಧಿಪಡೆದಿದೆ.

26) ಪ್ರಾಚೀನ ಕಾಲದಲ್ಲಿ ಚನ್ನಪಟ್ಟಣ ವೀಣೆ ತಂತಿಗಳ ತಯಾರಿಕೆಯಲ್ಲಿ ಪ್ರಸಿದ್ಧವಾಗಿದ್ದುದಕ್ಕೆ  ಐತಿಹಾಸಿಕ ದಾಖಲೆಗಳು ದೊರೆಯುತ್ತವೆ.

27) ಚನ್ನಪಟ್ಟಣವನ್ನು ಮೊದಲು ತಿಮ್ಮಪ್ಪ ರಾಜ ಅರಸು ಎಂಬ ಸಾಮಂತ ಆಳುತ್ತಿದ್ದರು.

28) ಚನ್ನಪಟ್ಟಣದ ಅಬ್ಬೂರ ಸಮೀಪ ಪುರಾಣ ಪ್ರಸಿದ್ಧ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಈ ಭಾಗದಲ್ಲಿ ಹರಿಯುವ ನದಿಗೆ ಕಣ್ವನದಿ ಎಂದು ಹೆಸರು ಬಂದಿದೆ.

29) ರೇವಣಸಿದ್ದೇಶ್ವರ ಸ್ವಾಮಿಗಳ ಪುಣ್ಯಕ್ಷೇತ್ರ ರಾಮನಗರ ಸಮೀಪದ‌ ಅವ್ವೇರಹಳ್ಳಿಯ ಬೆಟ್ಟದಲ್ಲಿದೆ.

30) ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀರಾಮಾನುಜಾಚಾರ್ಯರು ಕೆಲವು ದಿನಗಳು ಚನ್ನಪಟ್ಟಣದ ವರದರಾಜಸ್ವಾಮಿ ದೇವಾಲಯದಲ್ಲಿ ನೆಲೆಸಿ ಸಿದ್ಧಾಂತವನ್ನು ಪ್ರಚಾರ ಮಾಡಿದ್ದಾಗಿ ಉಲ್ಲೇಖವಿದೆ.

31) ಚನ್ನಪಟ್ಟಣದ ಪ್ರಾಚೀನ ಹೆಸರು '‌ ಚಂದದ ಪಟ್ಟಣ' ಎಂಬುದಾಗಿ ಇತ್ತು.

32) ರಾಮನಗರದ‌ ಪ್ರಾಚೀನ ಹೆಸರು ' ‌ಕ್ಲೋಸ್ ಪೇಟೆ '.

33) ಕನಕಪುರದ ಮೊದಲ ಹೆಸರು  'ಕಾನಕಾನ ಹಳ್ಳಿ' ಎಂದು ಕರೆಯಲಾಗುತ್ತಿತ್ತು.

34) ಕರ್ನಾಟಕ ರಾಜ್ಯದ ಏಕೈಕ ಕಾರು ತಯಾರಿಕಾ ಕಂಪನಿ "ಟೊಯೋಟಾ ಕಿರ್ಲೋಸ್ಕರ್ ಮೋಟಾರ್" ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದೆ.

35) ಮಾಗಡಿಯ ಸಾವನದುರ್ಗ ಬೆಟ್ಟ ಇತಿಹಾಸ ಪ್ರಸಿದ್ಧ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ.

ರಾಮನಗರ ಜಿಲ್ಲೆ

ರಾಮನಗರ ಜಿಲ್ಲೆಯ ವಿಶೇಷತೆಗಳು

1) ಕರ್ನಾಟಕದ ರೇಷ್ಮೆನಗರಿ ಎಂದು ಕರೆಯಲ್ಪಡುವ ಜಿಲ್ಲೆ ನಮ್ಮ ರಾಮನಗರ.

2) ಕರ್ನಾಟಕದ 2ನೇ ಮುಖ್ಯಮಂತ್ರಿ ಹಾಗೂ ವಿಧಾನಸೌದದ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ತವರು ರಾಮನಗರ.

3) ರಾಮನಗರ ಜಿಲ್ಲೆಯ ಮಾಗಡಿಯ ನಾಡಪ್ರಭು ಕೆಂಪೇಗೌಡರು ವಿಶ್ವವಿಖ್ಯಾತ ಬೆಂಗಳೂರಿನ ಸ್ಥಾಪಕರು.

4) ಬೊಂಬೆಗಳ ನಗರಿ ಚನ್ನಪಟ್ಟಣದ ಬೊಂಬೆಗಳು ವಿಶ್ವಪ್ರಸಿದ್ಧವಾಗಿವೆ.

5) ಅಮೇರಿಕಾದ ಶ್ವೇತಭವನವನ್ನು ಚನ್ನಪಟ್ಟಣದ ಬೊಂಬೆಗಳು ಅಲಂಕರಿಸಿರುವುದು ಜಿಲ್ಲೆಗೆ ಹೆಮ್ಮೆಯ ವಿಷಯ.

6) ಗಂಗ ವಂಶದ ರಾಜರ 4 ಪ್ರಮುಖವಾದ ರಾಜಧಾನಿಗಳಲ್ಲಿ ಚನ್ನಪಟ್ಟಣ ತಾಲ್ಲೂಕಿನ ಮಾಕುಂದ ಎಂಬ ಊರು ಕೂಡ ಒಂದು.

7) ಭಾರತೀಯ ಚಿತ್ರರಂಗದ ಮೈಲುಗಲ್ಲೆನಿಸಿದ ಹಿಂದಿಯ ಖ್ಯಾತ ಶೋಲೆ ಚಿತ್ರ ರಾಮನಗರದ ರಾಮದೇವರ ಬೆಟ್ಟದಲ್ಲಿ ಚಿತ್ರೀಕರಣಗೊಂಡು ಲೋಕವಿಖ್ಯಾತವಾಯಿತು.

8) ರಾಮನಗರವು ಜಾನಪದ ಕಲೆಗಳಿಗೆ ಹೆಸರುವಾಸಿಯಾದ ಜಿಲ್ಲೆ.ಚನ್ನಪಟ್ಟಣ ತಾಲ್ಲೂಕಿನ ಸಮೀಪ ಪ್ರಸಿದ್ಧವಾದ ಜಾನಪದ ಲೋಕವಿದೆ.

9) ಜಾನಪದ ಗಾಯನದಲ್ಲಿ ರಾಮನಗರದ ಬಾನಂದೂರು ಕೆಂಪಯ್ಯನವರು ಹೆಸರುವಾಸಿಯಾಗಿದ್ದರು.

10) ಕಾವೇರಿ ಮತ್ತು ಅರ್ಕಾವತಿ ನದಿಗಳ ಪವಿತ್ರ ಸಂಗಮವಾಗುವ ಸ್ಥಳ ಕನಕಪುರದ ಸಂಗಮ ಎಂಬ ಊರಿನಲ್ಲಿದೆ.

11) ದಕ್ಷಿಣ ಭಾರತದ ಪ್ರಖ್ಯಾತ ನಟಿಯಾದ ಪದ್ಮಭೂಷಣ ಡಾ!!.ಬಿ.ಸರೋಜಾದೇವಿಯವರು ಚನ್ನಪಟ್ಟಣದ ದಶವಾರ ಎಂಬ ಗ್ರಾಮದವರು.

12) ಕನ್ನಡನಾಡಿನ ಖ್ಯಾತ ಸಾಹಿತಿಗಳಾದ ನಾಡೋಜ ದೇ.ಜವರೇಗೌಡರ ಜನ್ಮಸ್ಥಳ ಚನ್ನಪಟ್ಟಣದ ಬಳಿಯ ಚಕ್ಕೆರೆ ಎಂಬ ಊರು.

13) ವಿಶ್ವದಲ್ಲೇ ಇತಿಹಾಸ ಪ್ರಸಿದ್ಧ ಸುಗ್ರೀವನ ದೇವಾಲಯ ಹೊಂದಿರುವ ಸ್ಥಳ‌ ಚನ್ನಪಟ್ಟಣ.

14) ಗಿಡಮರಗಳನ್ನೇ ತನ್ನ ಮಕ್ಕಳೆಂದು ಭಾವಿಸಿ, ಅವುಗಳನ್ನು ಸಂರಕ್ಷಿಸಿ ಬೆಳೆಸಿ ದೇಶಕ್ಕೇ ಆದರ್ಶ ಮಹಿಳೆಯಾದ ಸಾಲುಮರದ ತಿಮ್ಮಕ್ಕ ನವರ ಊರು ಮಾಗಡಿ.

15) ವಿಷ್ಣುಸಹಸ್ರ ನಾಮದಲ್ಲಿ ಉಲ್ಲೇಖವಾಗಿರುವ ಅಪ್ರಮೇಯ ಎಂಬ ನಾಮದ ವಿಶ್ವದಲ್ಲೇ ಏಕೈಕ ದೇವಾಲಯವಿರುವುದು ಚನ್ನಪಟ್ಟಣದ ಸಮೀಪದ ದೊಡ್ಡ ಮಳೂರು ಎಂಬ ಗ್ರಾಮದಲ್ಲಿ ಮಾತ್ರ.

16) ಕರ್ನಾಟಕ ರತ್ನ, ಪದ್ಮಭೂಷಣ ಸಿದ್ಧಗಂಗಾ ಶ್ರೀಗಳಾದ ಡಾ!!.ಶಿವಕುಮಾರ ಮಹಾಸ್ವಾಮಿಗಳ ಜನ್ಮಸ್ಥಳ ಮಾಗಡಿಯ ಸಮೀಪದ ವೀರಾಪುರ      ಗ್ರಾಮ

17) ಪದ್ಮಭೂಷಣ ಬಾಲಗಂಗಾಧರನಾಥ ಸ್ವಾಮಿಗಳ ಜನ್ಮಸ್ಥಳ ಬಿಡದಿ ಸಮೀಪದ ಬಾನಂದೂರು.

[18) ಭಾರತ ದೇಶದಲ್ಲಿ ಉದ್ದ ಕೊಕ್ಕಿನ ಹದ್ದುಗಳು ಅತಿ ಹೆಚ್ಚು ಕಂಡುಬರುವುದು ರಾಮನಗರದ ರಾಮದೇವರ ಬೆಟ್ಟದಲ್ಲಿ ಮಾತ್ರ.

19) ದಕ್ಷಿಣ ಭಾರತದಲ್ಲಿ ಅತಿದೊಡ್ಡ ಏಕಶಿಲಾ ಬೆಟ್ಟ ಇರುವುದು ರಾಮನಗರದಲ್ಲಿ.

[20) ಮಾಧ್ವ ಪರಂಪರೆಯಲ್ಲಿ ಬಂದ ಯತಿಗಳಾದ ಬ್ರಹ್ಮಣ್ಯತೀರ್ಥರ ಬೃಂದಾವನ ಚನ್ನಪಟ್ಟಣದ ಅಬ್ಬೂರು ಗ್ರಾಮದಲ್ಲಿ ಇದೆ.

[21) ವಿಜಯನಗರ ಸಾಮ್ರಾಜ್ಯದ ರಾಜಗುರುಗಳಾಗಿದ್ದ ವ್ಯಾಸರಾಯರು ಚನ್ನಪಟ್ಟಣದ ದೇವರಹೊಸಹಳ್ಳಿಯಲ್ಲಿ ಮುಖ್ಯಪ್ರಾಣ ಹನುಮಂತನ ವಿಗ್ರಹ   ಸ್ಥಾಪಿಸಿದ್ದಾರೆ.

22) ಪುರಂದರದಾಸರು  ಚನ್ನಪಟ್ಟಣದ ಅಪ್ರಮೇಯ ದೇವಾಲಯದಲ್ಲಿನ ಅಂಬೆಗಾಲು ಕೃಷ್ಣನ ಮೂರ್ತಿಯನ್ನು ನೋಡಿ ಪ್ರಸಿದ್ಧ ಕೀರ್ತನೆಯಾದ 'ಆಡಿಸಿದಳು ಯಶೋಧೆ ಸುಗುಣಾಂತರಂಗನ ಅಪ್ರಮೇಯನ` ಎಂಬ ಗೀತೆ ರಚಿಸಿದ್ದಾರೆ.

23) ಪ್ರತಿಷ್ಠಿತ ಪೋಲೀಸ್ ತರಬೇತಿ ಶಾಲೆ( PTS ) ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲ್ಲೂಕಿನಲ್ಲಿದೆ.

25) 1999ನೇ ಇಸವಿಯಲ್ಲಿ ಕನಕಪುರದಲ್ಲಿ ನಡೆದ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಖ್ಯಾತ ಸಾಹಿತಿ S.L.ಭೈರಪ್ಪನವರು ಅಧ್ಯಕ್ಷರಾಗಿದ್ದರು.

24) ಭಾರತ ದೇಶದಲ್ಲಿ ಕಪ್ಪುಬಣ್ಣದ  ಗ್ರಾನೈಟ್ ಶಿಲೆಗೆ ಕನಕಪುರ ಪ್ರಸಿದ್ಧಿಪಡೆದಿದೆ.

26) ಪ್ರಾಚೀನ ಕಾಲದಲ್ಲಿ ಚನ್ನಪಟ್ಟಣ ವೀಣೆ ತಂತಿಗಳ ತಯಾರಿಕೆಯಲ್ಲಿ ಪ್ರಸಿದ್ಧವಾಗಿದ್ದುದಕ್ಕೆ  ಐತಿಹಾಸಿಕ ದಾಖಲೆಗಳು ದೊರೆಯುತ್ತವೆ.

27) ಚನ್ನಪಟ್ಟಣವನ್ನು ಮೊದಲು ತಿಮ್ಮಪ್ಪ ರಾಜ ಅರಸು ಎಂಬ ಸಾಮಂತ ಆಳುತ್ತಿದ್ದರು.

28) ಚನ್ನಪಟ್ಟಣದ ಅಬ್ಬೂರ ಸಮೀಪ ಪುರಾಣ ಪ್ರಸಿದ್ಧ ಕಣ್ವ ಮಹರ್ಷಿಗಳು ತಪಸ್ಸು ಮಾಡಿದ್ದರಿಂದ ಈ ಭಾಗದಲ್ಲಿ ಹರಿಯುವ ನದಿಗೆ ಕಣ್ವನದಿ ಎಂದು ಹೆಸರು ಬಂದಿದೆ.

29) ರೇವಣಸಿದ್ದೇಶ್ವರ ಸ್ವಾಮಿಗಳ ಪುಣ್ಯಕ್ಷೇತ್ರ ರಾಮನಗರ ಸಮೀಪದ‌ ಅವ್ವೇರಹಳ್ಳಿಯ ಬೆಟ್ಟದಲ್ಲಿದೆ.

30) ವಿಶಿಷ್ಟಾದ್ವೈತ ಸಿದ್ಧಾಂತ ಪ್ರತಿಪಾದಕರಾದ ಶ್ರೀರಾಮಾನುಜಾಚಾರ್ಯರು ಕೆಲವು ದಿನಗಳು ಚನ್ನಪಟ್ಟಣದ ವರದರಾಜಸ್ವಾಮಿ ದೇವಾಲಯದಲ್ಲಿ ನೆಲೆಸಿ ಸಿದ್ಧಾಂತವನ್ನು ಪ್ರಚಾರ ಮಾಡಿದ್ದಾಗಿ ಉಲ್ಲೇಖವಿದೆ.

31) ಚನ್ನಪಟ್ಟಣದ ಪ್ರಾಚೀನ ಹೆಸರು '‌ ಚಂದದ ಪಟ್ಟಣ' ಎಂಬುದಾಗಿ ಇತ್ತು.

32) ರಾಮನಗರದ‌ ಪ್ರಾಚೀನ ಹೆಸರು ' ‌ಕ್ಲೋಸ್ ಪೇಟೆ '.

33) ಕನಕಪುರದ ಮೊದಲ ಹೆಸರು  'ಕಾನಕಾನ ಹಳ್ಳಿ' ಎಂದು ಕರೆಯಲಾಗುತ್ತಿತ್ತು.

34) ಕರ್ನಾಟಕ ರಾಜ್ಯದ ಏಕೈಕ ಕಾರು ತಯಾರಿಕಾ ಕಂಪನಿ "ಟೊಯೋಟಾ ಕಿರ್ಲೋಸ್ಕರ್ ಮೋಟಾರ್" ರಾಮನಗರದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿದೆ.

35) ಮಾಗಡಿಯ ಸಾವನದುರ್ಗ ಬೆಟ್ಟ ಇತಿಹಾಸ ಪ್ರಸಿದ್ಧ ಹಾಗೂ ಪ್ರಾಕೃತಿಕ ಸೌಂದರ್ಯದಿಂದ ಕೂಡಿದೆ.