ಬುಧವಾರ ೨೫ ನವೆಂಬರ್ ೨೦೦೯

ನನ್ನೂರು

ಮಾಕಳಿ ಎಂಬ ಹೆಸರು ಈ ಊರಿಗೆ ಬರಲು ಹಲವು ಐತಿಹ್ಯಗಳನ್ನು ಜನ ಹೇಳುತ್ತಾರೆ. ಒಬ್ಬ ಭಿಕ್ಷುಕ ಭಿಕ್ಷೆ ಬೇಡುತ್ತಾ ಊರೂರು

ಅಲೆಯುತ್ತಿದ್ದಾಗ ಆತನಿಗೆ ಎಲ್ಲೂ ಭಿಕ್ಷೆ ಸಿಗದೇ ಕೊನೆಗೆ ಈ ಊರಿನಲ್ಲಿ ಹೆಚ್ಚಾಗಿ ಸಿಕ್ಕಾಗ ಆತ "ಮಹಾ ಕಲಿ" ಎಂದನಂತೆ ತದನಂತರದಲ್ಲಿ

ಈ ಹೆಸರು ಮಾಕಳಿಯಾಗಿದೆ. ಮತ್ತೊಂದರ ಪ್ರಕಾರ ಉಪ್ಪಿನ ಕಾಯಿಗೆ ಬಳಸುವ "ಮಾಕಳಿ ಬೇರು" ಹೆಚ್ಚಾಗಿ ದೊರೆತ್ತಿದ್ದರಿಂದ

ಈ ಹೆಸರು ಬಂದಿದೆ.

ಚನ್ನಪಟ್ಟಣದಿಂದ ಉತ್ತರಕ್ಕೆ ೧೫ ಕಿಲೋ ಮೀಟರ್ ದೂರವಿರುವ ಮಾಕಳಿಗ್ರಾಮ. ಸುಮಾರು ೩೫೦೦ ರಿಂದ ೪೦೦೦ ಜನಸಂಖ್ಯೆಯನ್ನು ಹೊಂದಿರುವ ಈ ಗ್ರಾಮ. ಸುಂದರವಾದ ಹಸಿರಿನಅರಣ್ಯದ ನಡುವೆ ಇರುವ ಮಾಕಳಿಗ್ರಾಮ. ರಾಜ ಮಹಾರಾಜರ ಕಾಲದ ಇತಿಹಾಸದ ಪುಟಗಳನ್ನೇ ತೆರೆದಿಡಲು ಇಲ್ಲಿ ಐವತ್ತಕ್ಕು ಹೆಚ್ಚಿನದಾಗಿ ದೊರೆಯುವ ವೀರಗಲ್ಲುಗಳು, ಮಾಸ್ತಿಗಲ್ಲುಗಳು ಒಂದು ಪುಟ್ಟ ಇತಿಹಾಸವನ್ನೇ ತೆರೆದಿಡುತ್ತವೆ ಆದರೆ ಇವುಗಳ ಬಗ್ಗೆ ಅಧ್ಯಯನ ನಡೆಸುವ ಅಗತ್ಯತೆ ಅವಶ್ಯಕ ವಾಗಿದೆ. ಮಾಕಳಿಯು ಗ್ರಾಮ ಪಂಚಾಯಿತಿಯನ್ನು ಹೊಂದಿದೆ. ಮಾಕಳಿ ಗ್ರಾಮಪಂಚಾಯಿತಿಯ ವ್ಯಾಪ್ತಿಯಲ್ಲಿ ಬರುವ ಪ್ರದೇಶವೆಂದರೆ ಮಾಕಳಿಹೊಸಹಳ್ಳಿ, ಕೋಟೆಹೋಲ(ರಾಮರಾಜಪುರ), ನಾಯಿದೊಳ್ಳೆ, ಪ್ಲಾಂಟೆಷನ ದೊಡ್ಡಿ, ರಾಮನರಸಿಂಹರಾಜಪುರ ಗ್ರಾಮಗಳನ್ನು ಒಳಗೊಂಡಿದೆ. ಮಾಕಳಿಯ ಪ್ರಖ್ಯಾತ ದೇವಸ್ಥಾನಗಳೆಂದರೆ ಶ್ರೀ ಹಿರಿಯಮ್ಮ ದೇವಸ್ಥಾನ,ಶ್ರೀ ಗೋಪಾಲ ಕೃಷ್ಣ ದೇವಸ್ಥಾನ, ಶ್ರೀ ಬಲ್ಲೆಲಿಂಗೇಶ್ವರ ದೇವಸ್ಥಾನ, ಶ್ರೀ ತಿಮ್ಮಪ್ಪ ದೇವಸ್ಥಾನ, ಶ್ರೀ ವೆಂಕಟೇಶ್ವರ ದೇವಸ್ಥಾನ ಮುಂತಾದವು. ಮಾಕಳಿ ಎಂದೊಡನೆ ಮಾಕಳಿ ಬೇರು ಪ್ರಸಿದ್ಧ ಮಾಕಳಿ ಬೇರಿನ ಉಪ್ಪಿನಕಾಯಿ ತುಂಬ ವಿಶಿಷ್ಟ. ಮಾಕಳಿಯಲ್ಲಿ ಒಂದನೆ ತರಗತಿಯಿಂದ ದ್ವಿತೀಯ ಪಿ.ಯು.ಸಿ ವರೆಗಿನ ಶಾಲಾ-ಕಾಲೇಜು ಸುತ್ತ ಮುತ್ತಲಿನ ಗ್ರಾಮಗಳ ಮಕ್ಕಳಿಗೆ ವ್ಯಾಸಂಗ ಮಾಡಲು ಅನುಕೂಲವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರವಿದೆ. ಒಟ್ಟಿನಲ್ಲಿ ಉತ್ತಮವಾದ ವಾತವಾರಣದಿಂದ ಕೂಡಿದ ಗ್ರಾಮ ಇದಾಗಿದೆ. ಇಲ್ಲಿನ ಜನರ ಪ್ರಮುಖ ಕಸುಬು ವ್ಯವಸಾಯ. ಪ್ರಮುಖವಾದ ಬೆಳೆಗಳೆಂದರೆ ರಾಗಿ, ಭತ್ತ, ಮಾವು, ತರಕಾರಿ ಬೆಳೆಗಳು ಇತ್ಯಾದಿ. ವ್ಯವಸಾಯದ ಜೊತೆಗೆ ಹೈನುಗಾರಿಕೆ, ಕುರಿ ಸಾಕಣೆ ಮುಖ್ಯ ಆಧಾಯದ ಮೂಲಗಳಾಗಿವೆ.


ಮಾಕಳಿಯ ಮತ್ತೊಂದು ವಿಶಿಷ್ಟತೆಯೆಂದರೆ ಪ್ರತಿವರ್ಷವು ನಡೆಯುವ ಹಿರಿಯಮ್ಮ ಗ್ರಾಮ ದೇವತೆಯ ಹಬ್ಬವು ಬಹು ವಿಜೃಭಣೆಯಿಂದ ಜರಗುತ್ತದೆ. ಈ ಹಬ್ಬವು ಒಂದು ವಾರಗಳ ಕಾಲ ನಡೆಯುತ್ತದೆ.ಸುತ್ತ ಮುತ್ತಲ ಗ್ರಾಮದವರಿಗೂ ಒಂದು ಸಡಗರದ ದಿನವಾಗಿರುತ್ತದೆ. ಈ ಸಂದರ್ಭದಲ್ಲಿ ನಡೆಯುವ ದೇವರ ಉತ್ಸವ, ಕೋಲಾಟ, ಕೊಂಡ(ಬೆಂಕಿಯ ಕೆಂಡದ ಮೇಲೆ ನಡೆಯುವುದು), ನೀರ್ಗಾಲಿ, ಡೊಳ್ಳು ಕುಣಿತ ಮುತಾಂದ ಕಾರ್ಯಕ್ರಮಗಳು ಜನರ ಮನ ಸೆಳೆಯುತ್ತವೆ.

ಗುರುವಾರ ೨೫ ಜೂನ್ ೨೦೦೯

ರಂಗಿನ ಚಿಟ್ಟೆ - ನನ್ನ ಕವನ

ರಂಗಿನ ಚಿಟ್ಟೆ

ರಂಗು ರಂಗಿನ ಬಣ್ಣದ ಚಿಟ್ಟೆ
ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ
ನನ್ನ ಹೃದಯವ ಅದಕ್ಕೆ ಕೊಟ್ಟೆ
ನಾನೊಂದು ಗಾಳಿಪಟವಾಗಿ ಬಿಟ್ಟೆ


ಸದಾ ಕನಸ್ಸಿನಲ್ಲಿ ತೇಲುತ್ತಿದ್ದೆ
ಬಣ್ಣ ಬಣ್ಣದ ರೆಕ್ಕೆಯ ಜೋಡಿಸಿದೆ
ಸುಂದರ ಪ್ರಪಂಚವ ಸೃಷ್ಟಿಸಿದೆ
ಪ್ರೀತಿಯ ಅಂಕುರವ ಅದಕ್ಕಿಟ್ಟಿದ್ದೆ


ಇದು ಮನಸ್ಸಿನ ಮಾಯಾಲೋಕ
ರಮಣೀಯವಾಗಿರುವ ಪ್ರೇಮಲೋಕ
ಕನಸ್ಸುಗಳ ಸೃಷ್ಟಿಯ ಬ್ರಹ್ಮ ಲೋಕ
ಊಹೆಗೂ ಮೀರಿದ ಕಲ್ಪನಾಲೋಕ


ಹುಡುಕುತ್ತಿರುವೆ ಈ ಪ್ರೀತಿಯ ಮೂಲವೆಲ್ಲಿ
ಕರಗಿಹೋದ ಸುಂದರ ಕ್ಷಣಗಳಲ್ಲಿ
ಅದ್ಭುತವೆನ್ನುವ ಕಿನ್ನರಲೋಕದಲ್ಲಿ
ಮರೆಯಾದ ಕಲ್ಪನಾ ಸಾಮ್ರಾಜ್ಯದಲ್ಲಿ


ಪ್ರೀತಿ-ಪ್ರೇಮವೇ ಲೋಕದ ಸೃಷ್ಟಿಗೆ ಮೂಲ
ಮತ್ತೆ ಸಿಗದು ಕಳೆದುಹೋದ ಕಾಲ
ಭೇದಿಸಲಾಗದು ಪ್ರೀತಿಯ ಮಾಯಾಜಾಲ
ನಿಗೂಢವಾಗಿಯೇ ಉಳಿದಿದೆ ಈ ಇಂದ್ರಜಾಲ

-.ಮಾ.ಕೃ.ಮ

ಓ ನನ್ನ ಜೀವವೇ - ನನ್ನ ಕವನ

ಓ ನನ್ನ ಜೀವವೇ

ಹೃದಯದ ಪ್ರೀತಿಯ ಕಲರವ
ಎನೋ ಕಳೆದುಹೋದ ಅನುಭವ
ಎದೆಯಲಿ ಪ್ರೀತಿಯ ಕಂಪನ
ಸದಾ ಜಿನುಗುವ ಸಿಂಚನ

ಸದಾ ಕಾಡುತ್ತಿದೆ ನಿನ್ನ ನೆನಪು
ಮಾಸಿಹೋದ ನೆನಪುಗಳ ಇಂಪು
ನಾ ಹುಡುಕುತ್ತಿರುವೆ ಆನಂದ
ದುಃಖವಿರದ ಸುಖದಲ್ಲಿಂದ

ಮನವು ಹಕ್ಕಿಯಂತೆ ಹಾರುತಿರಲಿ
ಅಂತ್ಯವಿರದ ಪ್ರೀತಿಯ ದಿಗಂತದಲಿ
ನವಿಲಿನಂತೆ ನಲಿಯುತ್ತಿದೆ ಮನಸ್ಸು
ನನಸ್ಸಾಗುವುದೇ ನನ್ನ ಕನಸ್ಸು

ಸದಾ ಮಾಡುತ್ತಿರುವೆ ನಿನ್ನ ಮನನ
ನೀ ಕೃಪೆ ತೋರಿದರೆ ನಾ ಪಾವನ
ನಾ ಬೆದರುವೆ ನನ್ನ ಆತ್ಮಕ್ಕೆ
ಧೈರ್ಯ ಕಳೆದುಹೋದ ಈ ಕ್ಷಣಕ್ಕೆ

ಮನದಲ್ಲಿ ಹುಟ್ಟಿತು ಈ ಕವನ
ನಾ ಮಾಡಲೇನು ಇದರ ವಾಚನ
- *ಮಾ.ಕೃ.ಮಂಜು*

ಮಿಡಿದ ಹೃದಯಕ್ಕೆ ನನ್ನ ಕಿವಿ ಮಾತು

ಓ ಹೃದಯವೇ ನಿನ್ನ ನೆನಪಿನಲ್ಲಿ..........

ಜೀವನವೆಂಬುದು ದಾರವಿಲ್ಲದ ಗಾಳಿಪಟದಾಗೆ ಅದು ಯಾವ ಕಡೆಗೆ ಹೋಗುತ್ತದೋ ತಿಳಿಯದು. ಈ ಜೀವನದ ಗೊಂದಲದ ಗೂಡಿನ್ನ್ನಲ್ಲಿ ಹಲವಾರು ವಿಷಯಗಳಿಗೆ ಉತ್ತರ ದೊರಕುವುದಿಲ್ಲ್ಲ. ಕೆಲವು ಸಾರಿ ಅವುಗಳಿಗೆ ಯಾವ ರೀತಿ ಪ್ರತಿಕ್ರಿಯೆ ಕೊಡುವುದು, ಆ ಪ್ರತಿಕ್ರಿಯೆಗೆ ಯಾವ ರೀತಿ ಉತ್ತರ ಬರುವುದು ಎಂಬ ಗೊಂದಲದ ಗೋಜಲಿನಲ್ಲಿ ಏನನ್ನು ಹೇಳಲಾಗದೇ ಕೆಲವನ್ನೂ ಕಳೆದುಕೊಂಡಿದ್ದೇನೆ. ನನಗೆ ಗೊತ್ತು ನಾನು ಅನೇಕ ಬಾರಿ ನನ್ನ ಇಷ್ಟಪಟ್ಟ ಹೃದಯಗಳಿಗೆ ತಿಳಿದೋ, ತಿಳಿಯದೋ ನೋವುಂಟು ಮಾಡಿದ್ದೇನೆ. ಆದರೆ ಅವುಗಳಿಗೆ ನಾನೇ ಹೊಣೆಯಲ್ಲ. ಅವುಗಳಲ್ಲೂ ತಮ್ಮ ಪಾಲು ಇದ್ದೇ ಇರುತ್ತದೆ. ಸದಾ ನಗುತ್ತಾ ಇರಬೇಕೆಂದು ಬಯಸುವವನು ನಾನು ಅನೇಕ ವಿಷಯಗಳಲ್ಲಿ ನಾನು ಅಹಂಕಾರದಿಂದ ಕೂಡಿರಬಹುದು. ನಾನು ನಮಗೆ ನೋವಾದರೂ ಬೇರೆಯವರಿಗೆ ನೋವುಂಟು ಮಾಡುವುದು ಸರಿಯಿಲ್ಲ ಎಂಬ ಭಾವನೆಯಲ್ಲಿ ಅನೇಕ ನಿರ್ಧಾರ ಕೈಗೊಂಡಿರುವುದು.

ಓ ಹೃದಯಗಳೇ, ನನ್ನಿಂದಾದ ನೋವಿಗೆ ಕ್ಷಮೆ ಇರಲಿ, ನಾನು ಪ್ರೀತಿಸುವವರು ನನ್ನನ್ನು ತಪ್ಪಾಗಿ ಅರ್ಥಮಾಡಿ ಕೊಳ್ಳುತ್ತಾರೆ. ಏಕೋ ಕೆಲವೋಮ್ಮೆ ಜೀವನವೇ ಬೇಸರ ಎನ್ನುವಷ್ಟರ ಮಟ್ಟಿಗೆ ತಲುಪಿದೆ. ನನ್ನವರು ನನ್ನಿಂದ ದೂರವಾಗುತ್ತಿರುವ ಸಂಕಟ ಹಾಗೂ ಸತತ ಸೋಲುಗಳ ಸುಳಿಯಲ್ಲಿ ಸಿಕ್ಕಿ ಗೆಲುವು ಮರೀಚಿಕೆಯಾಕೆ ನನ್ನ ಜೀವವನ್ನು ಸುಡುತ್ತಿದೆ. ಬಾಳಿನ ಸೂತ್ರಪಟ ಯಾವ ದಿಕ್ಕಿನಲ್ಲಿ ಸಾಗುತ್ತಿದೆ ಎಂಬ ಸುಳಿವೆ ಇಲ್ಲದೆ ಸಾಗುತ್ತಿದೆ. ಸರಿ ದಾರಿಯು ತೊರುವುದು ಎಂತೂ, ನಗುವಿನ ಆಶಾಕಿರಣ ಮೂಡುವುದು ಎಂತೂ..... ಸದಾ ಗೆಲವಿನ ಸಿಂಚನದ ನಿರೀಕ್ಷೆಯಲಿ....................... ಮಂಜು.......

ಬುಧವಾರ ೨೪ ಜೂನ್ ೨೦೦೯

ಅರವತ್ನಾಲ್ಕು ವಿದ್ಯೆಗಳು

ಅರವತ್ನಾಲ್ಕು ವಿದ್ಯೆಗಳು

ವೇದ

೩೩

ಜಲಸ್ತಂಭ

ವೇದಾಂಗ

೩೪

ವಾಯುಸ್ತಂಭ

ಇತಿಹಾಸ

೩೫

ಖಡ್ಗಸ್ತಂಭ

ಆಗಮ

೩೬

ವಶ್ಯಾ

ನ್ಯಾಯ

೩೭

ಆಕರ್ಷಣ

ಕಾವ್ಯ

೩೮

ಮೋಹನ

ಅಲಂಕಾರ

೩೯

ವಿದ್ವೇಷಣ

ನಾಟಕ

೪೦

ಉಚ್ಚಾಟನ

ಗಾನ

೪೧

ಮಾರಣ

೧೦

ಕವಿತ್ವ

೪೨

ಕಾಲವಂಚನ

೧೧

ಕಾಮಶಾಸ್ತ್ರ

೪೩

ವಾಣಿಜ್ಯ

೧೨

ದೂತನೈಪುಣ್ಯ

೪೪

ಪಶುಪಾಲನ

೧೩

ದೇಶ ಭಾಷಾ ಜ್ಞಾನ

೪೫

ಕೃಷಿ

೧೪

ಲಿಪಿ ಕರ್ಮ

೪೬

ಸಮಶರ್ಮ

೧೫

ವಾಚ

೪೭

ಲಾವುಕಯುದ್ಧ

೧೬

ಸಮಸ್ತಾವಧಾನ

೪೮

ಮೃಗಯಾ

೧೭

ಸ್ವರಪರೀಕ್ಷಾ

೪೯

ಪುತಿಕೌಶಲ

೧೮

ಶಾಸ್ತ್ರಪರೀಕ್ಷಾ

೫೦

ದೃಶ್ಯಶರಣಿ

೧೯

ಶಕುನಪರೀಕ್ಷಾ

೫೧

ದ್ಯೂತಕರಣಿ

೨೦

ಸಾಮುದ್ರಿಕಪರೀಕ್ಷಾ

೫೨

ಚಿತ್ರಲೋಹ, ಪಾರ್ಷಾಮೃತ್,ದಾರು ವೇಣು ಚರ್ಮ ಅಂಬರ ಕ್ರಿಯೆ

೨೧

ರತ್ನಪರೀಕ್ಷಾ

೫೩

ಚೌರ್ಯ

೨೨

ಸ್ವರ್ಣಪರೀಕ್ಷಾ

೫೪

ಔಷಧಸಿದ್ಧಿ

೨೩

ಗಜಲಕ್ಷಣ

೫೫

ಮಂತ್ರಸಿದ್ಧಿ

೨೪

ಅಶ್ವಲಕ್ಷಣ

೫೬

ಸ್ವರವಂಚನಾ

೨೫

ಮಲ್ಲವಿದ್ಯಾ

೫೭

ದೃಷ್ಟಿವಂಚನಾ

೨೬

ಪಾಕಕರ್ಮ

೫೮

ಅಂಜನ

೨೭

ದೋಹಳ

೫೯

ಜಲಪ್ಲವನ

೨೮

ಗಂಧವಾದ

೬೦

ವಾಕ್ ಸಿದ್ಧಿ

೨೯

ಧಾತುವಾದ

೬೧

ಘಟಿಕಾ ಸಿದ್ಧಿ

೩೦

ಖನಿವಾದ

೬೨

ಪಾದುಕಾ ಸಿದ್ಧಿ

೩೧

ರಸವಾದ

೬೩

ಇಂದ್ರ ಜಾಲ

೩೨

ಅಗ್ನಿಸ್ತಂಭ

೬೪

ಮಹೇಂದ್ರ ಜಾಲ

64 ವಿದ್ಯೆಗಳು





ಮಂಗಳವಾರ ೧೬ ಜೂನ್ ೨೦೦೯

ಪ್ರಶ್ನೋತ್ತರ ಮಾಲಿಕೆ - ೬

.’ಬಸವಯ್ಯ, ನೀನು ಕಲಿತವನು, ಲೋಕವೆಂಬುದು ಮಾಯೆ ಎಂದರಿತ ಸುಜ್ಞಾನಿ, ಪ್ರೇಮದೀ ಚಂಚಲತೆಯನ್ನು ಕಾವ್ಯಗಳನ್ನೋದಿತಿಳಿದವನುಕುವೆಂಪು ವಿರಚಿತ ಯಾವ ನಾಟಕದ ಸಾಲುಗಳಿವು?

ಉತ್ತರ: ರಕ್ತಾಕ್ಷಿ
. ಅಗ್ನಿವರ್ಷ ಎಂಬ ಹಿಂದಿ ಚಲನಚಿತ್ರ ಯಾವ ಕನ್ನಡ ನಾಟಕವನ್ನು ಆಧರಿಸಿದೆ ಮತ್ತು ಅದರ ಕರ್ತೃ ಯಾರು?

ಉತ್ತರ: ಅಗ್ನಿ ಮತ್ತು ಮಳೆ / ಗಿರೀಶಕಾರ್ನಾಡ

.ಕನ್ನಡ ಕಾದಂಬರೀ ಪ್ರಪಂಚದಲ್ಲಿ ವಾಣಿಜ್ಯ ಜಗತ್ತನ್ನು ಮೊದಲು ಪರಿಚಯಿಸಿದ ಕಾದಂಬರಿಯ ಹೆಸರೇನು?

ಉತ್ತರ: ಚಿತ್ತಾಲರ ಶಿಕಾರಿ

. ಕನ್ನಡಕ್ಕೊಂದು ಶಾಸ್ತ್ರೀಯ ನಿಘಂಟು ನೀಡಿದ ಹೆಗ್ಗಳಿಕೆ ಕಿಟೆಲರದು. ಅದಿರಲಿ, ಕನ್ನಡದ ಯಾವುದೇ ನಿಘಂಟಿನಲ್ಲಿ ಮೊದಲು ಕಾಣಸಿಗುವಪ್ರಾಣಿ ಯಾವುದು?

ಉತ್ತರ: ಅಜ

. ಯೇಸುಕ್ರಿಸ್ತನ ಕೊನೆಯ ಕ್ಷಣಗಳನ್ನು ದಾಖಲಿಸಿರುವ ಗೋವಿಂದ ಪೈಯವರ ಕಥನಕವನದ ಶೀರ್ಷಿಕೆ ಏನು?

ಉತ್ತರ: ಗೊಲ್ಗೊಥಾ

. ಮೊದಲ ಟಾಕೀ ಚಲನಚಿತ್ರ ಯಾವುದು? [ಅಂದರೆ: ಕನ್ನಡದ ಮೊಟ್ಟ ಮೊದಲ "ಮಾತುಗಳನ್ನೊಳಗೊಂಡ" ಚಲನಚಿತ್ರ ಯಾವುದು?]

ಉತ್ತರ: ಸತಿ ಸುಲೋಚನ

೭. ರಾಷ್ಟ್ರಪತಿಗಳ ಸ್ವರ್ಣಕಮಲ ಪ್ರಶಸ್ತಿ ಗಳಿಸಿದ ಗಿರೀಶ್ ಕಾಸರವಳ್ಳಿ ನಿರ್ದೇಶನದ ಯು ಆರ್ ಅನಂತಮೂರ್ತಿ ಕಥೆಯಾಧಾರಿತ ಕನ್ನಡ ಚಿತ್ರಯಾವುದು?

ಉತ್ತರ: ಘಟಶ್ರಾದ್ಧ

. ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ರಾ ಬೇಂದ್ರೆಯವರಿಗೆ ಎರಡು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೆಟ್ ನೀಡಿ ತಮ್ಮ ಗೌರವಹೆಚ್ಚಿಸಿಕೊಂಡವು. ಅದರಲ್ಲಿ ಒಂದು ಕರ್ನಾಟಕ ವಿವಿಯಾದರೆ ಮತ್ತೊಂದು ಯಾವುದು?

ಉತ್ತರ: ಬನಾರಸ್ ಹಿಂದೂ ವಿಶ್ವವಿದ್ಯಾಲಯ, BHU

೯. ಡಿ.ವಿ. ಗುಂಡಪ್ಪನವರ ಮಗ ಪ್ರಸಿದ್ದ ಸಸ್ಯಶಾಸ್ತ್ರಜ್ಞ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ. ಹಸಿರು ಹೊನ್ನು ಎಂಬ ಪ್ರಸಿದ್ಧಜೀವವಿಜ್ಞಾನ ಪುಸ್ತಕದ ರಚನಕಾರರಾದ ಅವರ ಹೆಸರು ಬಿ ಜಿ ಎಲ್ ಸ್ವಾಮಿ. ಬಿ ಜಿ ಎಲ್ ಸ್ವಾಮಿಯವರ ಹೆಸರನ್ನು ವಿಸ್ತರಿಸಿರಿ.

ಉತ್ತರ: ಬೆಂಗಳೂರುಗುಂಡಪ್ಪ ಲಕ್ಷ್ಮೀನಾರಾಯಣ ಸ್ವಾಮಿ

ಪ್ರಶ್ನೋತ್ತರ ಮಾಲಿಕೆ - ೫

. "ದೇವಾಲಯಗಳ ಚಕ್ರವತ್ರಿ" ಎಂದು ಕರೆಸಿಕೊಳ್ಳುವ ದೇವಾಲಯ ಯಾವುದು?

ಉತ್ತರ : ಇಟಗಿಯ ಮಹಾದೇವ ದೇವಾಲಯ
. ಆಕಾಶವಾಣಿಯ ಮೂಲಕ ಮೊದಲು ಮಾತನಾಡಿದ ಕನ್ನಡಿಗ ಯಾರು?

ಉತ್ತರ : ಕೆ.ವಿ.ಪುಟ್ಟಪ್ಪ
. ಭಾರತೀಯ ಸಂವಿಧಾನ ಬರೆಯುವಾಗ ಇದ್ದ ಕನ್ನಡಿಗ ಯಾರು?

ಉತ್ತರ : ಬೆನಗಲ್ ರಾಮರಾವ್
. ಕರ್ನಾಟಕದಲ್ಲಿರುವ ಏಕೈಕ "ದಂತ ಸಿಂಹಾಸನ" ಎಲ್ಲಿದೆ?

ಉತ್ತರ : ಶಿವಮೊಗ್ಗ ಜಿಲ್ಲೆಯ ಶ್ರೀರಾಮಪುರ ಮಠದಲ್ಲಿ
. ಕರ್ನಾಟಕದ" ಗಿರಿಧಾಮಗಳ ರಾಣಿ "ಯಾವುದು?

ಉತ್ತರ : ಕೆಮ್ಮಣ್ಣ ಗುಂಡಿ " ಕೃಷ್ಣ ರಾಜೇಂದ್ರ ಗಿರಿಧಾಮ
. "ನವಿಲು ತೀರ್ಥ ಅಣ್ಣೆಕಟ್ಟು" ಯಾವ ನದಿಗೆ ಕಟ್ಟಲಾಗಿದೆ?

ಉತ್ತರ : ಮಲಪ್ರಭ ನದಿಗೆ
. ಕರ್ನಾಟಕದ ಮಠವೂಂದರಲ್ಲಿ "ಬೈಬಲ್"ಗೆ ಪೂಜೆಯಾಗುತ್ತಿದೆ ಅದು ಯಾವ ಮಠ?

ಉತ್ತರ : ನವಲಗುಂದದ ನಾಗಾಲಿಂಗಸ್ವಾಮಿ ಮಠದಲ್ಲಿ.
. ನಂಜನಗೂಡಿಗಿರುವ ಹಳೆಯ ಹೆಸರೇನು?

ಉತ್ತರ : ಗರಳಪುರಿ
. ಜಯಂತಿ, ವೈಜಯಂತಿಪುರ ಎಂದು ಹೆಸರಿದ್ದ ಐತಿಹಾಸಿಕ ನಗರದ ಈಗಿನ ಹೆಸರೇನು?

ಉತ್ತರ : ಬನವಾಸಿ
೧೦. ಚಂದ್ರಗುಪ್ತ ಮೊರ್ಯ ತನ್ನ ಕೊನೆಯ ದಿನಗಳನ್ನು ಕಳೆದ ಸ್ಥಳ ಕರ್ನಾಟಕದಲ್ಲಿ ಎಲ್ಲಿ?

ಉತ್ತರ : ಶ್ರವಣ ಬೆಳಗೊಳದಲ್ಲಿ


ಪ್ರಶ್ನೋತ್ತರ ಮಾಲಿಕೆ - ೪

. ಕರ್ನಾಟಕದಲ್ಲಿ ಕೂಗುವ ಬಂಡೆ ಎಲ್ಲಿದೆ?

ಉತ್ತರ: ಮೊಣಕಾಲ್ಮೂರು - ಕಲ್ಲಿನ ಮೇಲೆ ಕಾಳಿದಾಸನ ಬಗ್ಗೆ ಬರೆಯಲಾಗಿದೆಯಾಂತೆ
. ಕನ್ನದ ಚಲನಚಿತ್ರದಲ್ಲಿ ಮೊದಲ ಮಹಿಳಾ ನಿರ್ದಶಕಿ ಯಾರು?

ಉತ್ತರ: ಶಾಮಲಾ.ಜಿ.ಭಾವೆ

. ರಾಜಕುಮಾರ ಹಾಡಿರುವ ಮೊದಲ ಚಲನಚಿತ್ರ ಗೀತೆ ಯಾವುದು?

ಉತ್ತರ: ರಾಜ್ ಅವರು ಮೊದಲು ಹಾಡಿದ ಚಿತ್ರ "ಹರಿಭಕ್ತ" - ಶರಣು ಶೊಭು ಶಿವ- ಸಂಗೀತ ನಿರ್ಧಶಕರು ಜಿ.ಕೆ.ವೇಂಕಟೇಶ್
. ರಾಷ್ಟ್ರೀಯನವಿಲು ಅಭಯಾರಣ್ಯಎಲ್ಲಿದೆ?

ಉತ್ತರ:ಕರ್ನಾಟಕದ ಆದಿಚುಂಚನಗಿರಿ - ಮಂಡ್ಯ ಜಿಲ್ಲೆ

. ಶ್ರೀರಂಗಪಟ್ಟಣದ ದೇವಾಲಯ ಕಟ್ಟಿಸಿದವರು ಯಾರು?

ಉತ್ತರ: ೧೮೯೪ ರಲ್ಲಿ ಗಂಗರ ಸಾಮಂತ ರಾಜ ತಿರುಮಲಯ್ಯ

. ಕರ್ನಾಟಕದಲ್ಲಿ ಅತ್ಯಂತ್ ದೊಡ್ಡ ತಾಮ್ರದ ಗಣಿ ಎಲ್ಲಿದೆ?

ಉತ್ತರ: ಚಿತ್ರದುರ್ಗ ಜಿಲ್ಲೆ- ಇಂಗರದಾಳು

. ಕರ್ನಾಟಕದ ಅತಿ ದೊಡ್ಡದಾದ ಕಬ್ಬಿಣ ನಿಕ್ಷೇಪ ಎಲ್ಲಿದೆ?

ಉತ್ತರ: ಚಿಕ್ಕಮಂಗಳೂರು ಜಿಲ್ಲೆ - ಕುದುರೆಮುಖದ ಬಳಿ ಇರುವ ಆರೋಳಿ
. ಕರ್ನಾಟಕದ ದೊಡ್ಡ ದೇವಾಲಯ ಎಲ್ಲಿದೆ?

ಉತ್ತರ: ಮೈಸೂರು ಜಿಲ್ಲೆ - ನಂಜನಗೂಡು ಶ್ರೀಕಂಠೇಶ್ವರ ದೇವಾಲಯ
. ಕರ್ನಾಟಕದ ಗಾಂಧಿ ಯಾರು?

ಉತ್ತರ: ಹರ್ಡಿಕರ್ ಮಂಜಪ್ಪ
೧೦. ಕರ್ನಾಟಕ ಸಾಹಿತ್ಯ ಅಕಾಡೆಮಿ ಹೊರ ತರುವ ಪತ್ರಿಕೆ ಹೆಸರೇನು?

ಉತ್ತರ: ಅನಿಕೇತನ.


ರವಿವಾರ ೧೪ ಜೂನ್ ೨೦೦೯

ಪ್ರಶ್ನೋತ್ತರ ಮಾಲಿಕೆ - ೩

೧. ಕನ್ನಡ ಸಾಹಿತ್ಯದ ಕೊಡುಗೆಗೆ 1998 ರಲ್ಲಿ ಜ್ಞಾನಪೀಠ ಪ್ರಶಸ್ತಿಯನ್ನು ಯಾರು ಸ್ವೀಕರಿಸಿದರು?
ಉತ್ತರ: ಗಿರೀಶ್ ಕಾರ್ನಾಡ್
೨. "ಕಾಕನಕೋಟೆ" ಇದರ ಕರ್ತೃ?
ಉತ್ತರ: ಡಾ. ಮಾಸ್ತಿ ವೆಂಕಟೇಶ ಅಯ್ಯಂಗಾರ್
೩. ಚುನಾವಣೆ ಗುರುತಿನ ಚೀಟಿ ಬಳಸಿದ ಭಾರತದ ಮೊದಲ ರಾಜ್ಯ ಯಾವುದು?
ಉತ್ತರ: ಹರಿಯಾಣ
೪. "ತ್ರಿವಿಕ್ರಮರ ಆಕಾಶಗುಂಟೆ" ಎಂಬ ಕವನ ಸಂಕಲನವನ್ನು ಬರೆದವರು?
ಉತ್ತರ: ಡಾ.ವಿ.ಕೃ.ಗೋಕಾಕ್‌
೫."ಸೂಳೆ ಸನ್ಯಾಸಿ" ನಾಟಕ ರಚಿಸಿದ ನಾಟಕಕಾರ ಯಾರು?
ಉತ್ತರ: ಕೆ.ವಿ.ಸುಬ್ಬಣ್ಣ
೬. ಕೆ.ವಿ. ಸುಬ್ಬಣ್ಣರವರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ತಂದು ಕೊಟ್ಟ ಕೃತಿ ಯಾವುದು?
ಉತ್ತರ: ಕವಿರಾಜ ಮಾರ್ಗ ಮತ್ತು ಕನ್ನಡ ಜಗತ್ತು
೭. "ತಮಿಳು ತಲೆಗಳ ನಡುವೆ" ಯನ್ನು ಬರೆದವರು?
ಉತ್ತರ: ಬಿ. ಜಿ. ಎಲ್. ಸ್ವಾಮಿ
೮. "ಸಂಜೆ ಐದರ ಮಳೆ " ಕವನ ಸಂಕಲನವನ್ನು ಬರೆದವರು?
ಉತ್ತರ: ಕೆ.ಎಸ್.ನಿಸಾರ್ ಅಹಮದ್

ಕೆಲವು ವಿಶಿಷ್ಟ ಮಾಹಿತಿಗಳು

  • ಬೆನ್ನು ಕೆಳಗೆ ಮಾಡಿ ಮಲಗುವ ಏಕೈಕ ಪ್ರಾಣಿಯೆಂದರೆ - ಮಾನವ.
  • ಹೆಣ್ಣು ಸೊಳ್ಳೆ ಒಂದು ವರ್ಷದಲ್ಲಿ ೧೫,೦೦,೦೦,೦೦೦ ಸೊಳ್ಳೆಗಳನ್ನು ಉತ್ಪತ್ತಿ ಮಾಡಬಲ್ಲದು.
  • ಒಂದು ಅಂಗುಲದಷ್ಟು ಮಣ್ಣು ನಿರ್ಮಾಣವಾಗಲು ೫೦೦ ರಿಂದ ೧೫೦೦ ವರ್ಷಗಳು ಬೇಕಾಗುತ್ತವೆ.
  • ಮಾನವನ ಮೂತ್ರ ಪಿಂಡದಲ್ಲಿ ಪ್ರತಿ ನಿಮಿಷಕ್ಕೆ ೧೨೦ ಮಿ.ಲೀ. ಮೂತ್ರ ತಯಾರಾಗುತ್ತದೆ.
  • ಸೂರ್ಯನು ತಿರುಗುವ ವೇಗದಿಂದಾಗಿ ಯಾವುದೇ ಸೂರ್ಯಗ್ರಹಣ ೭ ನಿಮಿಷ ೫೮ ಸೆಕೆಂಡ್ ಗಿಂತ ಹೆಚ್ಚು ಕಾಲ ಇರಲಾರದು.
  • ಮಾನವನ ಮೂತ್ರಜನಕಾಂಗವು ಒಂದು ದಿನದಲ್ಲಿ ಸುಮಾರು ಎರಡು ಸಾವಿರ ಲೀಟರಿನಷ್ಟು ರಕ್ತವನು ಶುದ್ಧೀಕರಿಸುತ್ತದೆ.
  • ಪಾದರಸ ದ್ರವರೂಪದಲ್ಲಿರುವ ಏಕೈಕ ಲೋಹ.
  • ನೀರಿನ ಒಂದು ಹನಿಯಲ್ಲಿ ೬,೦೦೦,೦೦೦,೦೦೦,೦೦೦,೦೦೦,೦೦೦,೦೦೦ ಅಣುಗಳಿರುತ್ತವೆ.
  • ಇರುವೆಗಳಲ್ಲಿ ಫಾರ್ಮಿಕ್ ಆಮ್ಲವಿರುವುದರಿಂದ ಅವುಗಳು ಕಚ್ಚಿದ್ದಾಗ ಉರಿಯುಂಟಾಗುತ್ತದೆ.
  • ಅತಿಯಾಗಿ ವಾಯುಮಾಲಿನ್ಯಕ್ಕೆ ಕಾರಣವಾಗುವ ಪದಾರ್ಥ - ಸಲ್ಫರ್ ಡೈ ಆಕ್ಸೈಡ್
  • ಪ್ರಾಚೀನ ಲಿಪಿಗಳನ್ನು ಓದುವ ಶಾಸ್ತ್ರವನ್ನು "ಪಾಲಿಯೋಗ್ರಫಿ" ಎನ್ನುತ್ತಾರೆ.

ಬುಧವಾರ ೬ ಮೆ ೨೦೦೯

ನಮ್ಮ ಕರ್ನಾಟಕ ಜಿಲ್ಲೆಗಳು

ನಮ್ಮ ಕರ್ನಾಟಕ ಜಿಲ್ಲೆಗಳು
೧ : ಬಾಗಲಕೋಟೆ
೨ : ಬೆಂಗಳೂರು ಗ್ರಾಮಾಂತರ
೩ : ಬೆಂಗಳೂರು ನಗರ
೪ : ಬೆಳಗಾವಿ
೫ : ಬಳ್ಳಾರಿ
೬ : ಬೀದರ್
೭ : ಬಿಜಾಪುರ
೮ : ಚಾಮರಾಜನಗರ
೯ : ಚಿಕ್ಕಮಗಳೂರು
೧೦ : ಚಿತ್ರದುರ್ಗ
೧೧ : ದಕ್ಷಿಣ ಕನ್ನಡ
೧೨ : ದಾವಣಗೆರೆ
೧೩ : ಧಾರವಾಢ
೧೪ : ಗದಗ್
೧೫ : ಗುಲ್ಬರ್ಗ
೧೬ : ಹಾಸನ
೧೭ : ಹಾವೇರಿ
೧೮ : ಕೊಡಗು
೧೯ : ಕೋಲಾರ
೨೦ : ಕೊಪ್ಪಲ
೨೧ : ಮಂಡ್ಯ
೨೨ : ಮೈಸೂರು
೨೩ : ರಾಯಚೂರು
೨೪ : ಶಿವಮೊಗ್ಗ
೨೫ : ತುಮಕೂರು
೨೬ : ಉಡುಪಿ
೨೭ : ಉತ್ತರ ಕನ್ನಡ
೨೮ : ಚಿಕ್ಕಬಳ್ಳಾಪುರ
೨೯ : ರಾಮನಗರ

ನಮ್ಮ ಕರ್ನಾಟಕ ರಾಜ್ಯ

ಕರ್ನಾಟಕ ಭಾರತದ ನಾಲ್ಕು ಪ್ರಮುಖ ದಾಕ್ಷಿಣಾತ್ಯ ರಾಜ್ಯಗಳಲ್ಲಿ ಒಂದು. ೧೯೭೩ ಕ್ಕೆ ಮೊದಲು ಕರ್ನಾಟಕದ ಹೆಸರು "ಮೈಸೂರು ರಾಜ್ಯ" ಎಂದಿದ್ದಿತು. ಇದಕ್ಕೆ ಕಾರಣ ಕರ್ನಾಟಕದ ಮೊದಲ ಸೃಷ್ಟಿ ಮೈಸೂರು ಸಂಸ್ಥಾನವನ್ನು ಆಧರಿಸಿದ್ದು (೧೯೫೦ ರಲ್ಲಿ). ೧೯೫೬ ರಲ್ಲಿ ಸುತ್ತಮುತ್ತಲ ರಾಜ್ಯಗಳ ಕನ್ನಡ ಪ್ರಧಾನ ಪ್ರದೇಶಗಳನ್ನು ಸೇರಿಸಲಾಯಿತು."ಕರ್ನಾಟಕ" ಎಂಬ ಹೆಸರಿಗೆ ಅನೇಕ ವ್ಯುತ್ಪತ್ತಿಗಳು ಪ್ರತಿಪಾದಿಸಲ್ಪಟ್ಟಿವೆ. ಎಲ್ಲಕ್ಕಿಂತ ಹೆಚ್ಚಾಗಿ ಒಪ್ಪಲ್ಪಟ್ಟಿರುವ ವ್ಯುತ್ಪತ್ತಿ ಎಂದರೆ ಕರ್ನಾಟಕ ಎಂಬುದು "ಕರು+ನಾಡು" ಎಂಬುದರಿಂದ ವ್ಯುತ್ಪತ್ತಿಯನ್ನು ಪಡೆದಿದೆ. ಕರು ನಾಡು ಎಂದರೆ "ಎತ್ತರದ ಪ್ರದೇಶ" ಎಂದು ಅರ್ಥ. ಕರ್ನಾಟಕ ರಾಜ್ಯದ ಸಮುದ್ರ ಮಟ್ಟದಿಂದ ಸರಾಸರಿ ಎತ್ತರ ೧೫೦೦ ಅಡಿ ಇದ್ದು ಇದು ಭಾರತದಲ್ಲಿ ಅತಿ ಹೆಚ್ಚಿನ ಸರಾಸರಿ ಎತ್ತರವುಳ್ಳ ರಾಜ್ಯಗಳಲ್ಲಿ ಒಂದು.ಕರ್ನಾಟಕದ ಪಶ್ಚಿಮಕ್ಕೆ ಅರಬ್ಬೀ ಸಮುದ್ರ, ವಾಯವ್ಯಕ್ಕೆ ಗೋವ ರಾಜ್ಯ, ಉತ್ತರಕ್ಕೆ ಮಹಾರಾಷ್ಟ್ರ, ಪೂರ್ವಕ್ಕೆ ಆಂಧ್ರ ಪ್ರದೇಶ ಆಗ್ನೇಯಕ್ಕೆ ತಮಿಳುನಾಡು ಮತ್ತು ನೈರುತ್ಯಕ್ಕೆ ಕೇರಳ ರಾಜ್ಯಗಳಿವೆ.ರಾಜ್ಯದಲ್ಲಿ ಮೂರು ಮುಖ್ಯ ಭೌಗೋಳಿಕ ಪ್ರದೇಶಗಳಿವೆ:ಕರಾವಳಿ ಪ್ರದೇಶ - ಪಶ್ಚಿಮ ಘಟ್ಟಗಳು ಮತ್ತು ಅರಬ್ಬೀ ಸಮುದ್ರದ ನಡುವೆ ಇರುವ ತಗ್ಗಿನ ಪ್ರದೇಶ, ಸಾಕಷ್ಟು ಮಳೆ ಪಡೆಯುತ್ತದೆ.ಪಶ್ಚಿಮ ಘಟ್ಟಗಳು - ಅರಬ್ಬೀ ಸಮುದ್ರದ ತೀರದೊಂದಿಗೆ ಸಾಗುವ ಪರ್ವತ ಸರಣಿ, ಸರಾಸರಿ ಸಮುದ್ರ ಮಟ್ಟದಿಂದ ೯೦೦ ಮೀ ಎತ್ತರದಲ್ಲಿದೆ. ಇಲ್ಲೂ ಸಹ ಸಾಕಷ್ಟು ಮಳೆ ಆಗುತ್ತದೆ.ಬಯಲು ಸೀಮೆ - ದಖನ್ ಪ್ರಸ್ಥಭೂಮಿ, ರಾಜ್ಯದ ಒಳನಾಡು, ಮಳೆ ಕಡಿಮೆ ಇರುವ ಪ್ರದೇಶ೨೦೦೧ ರ ಜನಗಣತಿಯಂತೆ, ೫ ಕೋಟಿಗೂ ಹೆಚ್ಚು ಜನಸಂಖ್ಯೆ ಇರುವ ಹತ್ತು ಭಾರತೀಯ ರಾಜ್ಯಗಳಲ್ಲಿ ಕರ್ನಾಟಕವೂ ಒಂದು. ಕರ್ನಾಟಕ ರಾಜ್ಯದಲ್ಲಿ ರಾಜಧಾನಿಯಾದ ಬೆಂಗಳೂರು ಮಾತ್ರ ೧೦ ಲಕ್ಷಕ್ಕಿಂತ ಹೆಚ್ಚಿನ ಜನಸಂಖ್ಯೆಯನ್ನು ಹೊಂದಿದ ನಗರ. ಇತರ ಪ್ರಮುಖ ನಗರಗಳೆಂದರೆ ಮೈಸೂರು,ಹುಬ್ಬಳ್ಳಿ-ಧಾರವಾಡ, ಮಂಗಳೂರು, ದಾವಣಗೆರೆ, ಬಳ್ಳಾರಿ, ಮತ್ತು ಬೆಳಗಾವಿ.ಭಾರತದ ಚಿನ್ನದ ಉತ್ಪಾದನೆಯ ಶೇ. ೯೦ ಕ್ಕೂ ಹೆಚ್ಚು ಕರ್ನಾಟಕದಲ್ಲಿ ನಡೆಯುತ್ತದೆ.

ಶನಿವಾರ ೨೪ ಜನವರೀ ೨೦೦೯

ಮನದ ವೇದನೆ - ನನ್ನ ಕವನ


ರಾಜಕೀಯ - ನನ್ನ ಕವನ


ಅಂದಗಾತಿ - ನನ್ನ ಕವನ


ನೇತಾಜಿ - ನನ್ನ ಕವನ


ಕನ್ನಡ ಪ್ರಪಂಚ

ಇದು ನನ್ನೊಬ್ಬನ ಪ್ರಪಂಚವಲ್ಲ ಪ್ರತಿಯೊಬ್ಬ ಕನ್ನಡಿಗನ ಮನದಾಳದ ಮಾತುಗಳನ್ನು ತುಂಬಿದ ಬ್ಲಾಗ್. ಇಲ್ಲಿ ನನ್ನ ಮನದಲ್ಲಿ ಮೂಡಿದ ಭಾವನೆಗಳ ಬಹಿರಂಗ ರೂಪವಷ್ಟೆ. ನನ್ನಲ್ಲಿ ಮೂಡಿದ ಸಾವಿರಾರು ಕನಸ್ಸುಗಳಲ್ಲಿ ಕೆಲವೇ ಕೆಲವನ್ನು ಮಾತ್ರ ಇಲ್ಲಿ ರೂಪಿಸಿದ್ದೇನೆ. ನೋವುಗಳ ಸುಳಿಯಲ್ಲಿ ಸಿಕ್ಕ ಹೃದಯದ ಭಾವನೆಗಳು ಇಲ್ಲಿ ವ್ಯಕ್ತವಾಗಿವೆ. ಪ್ರೀತಿಯ ಹೃದಯದ ಮಾತುಗಳಿಗೆ ಸದಾ ಹಂಬಲಿಸುತ್ತಿರುವ ಹೃದಯ ನನ್ನದು. ನನ್ನ ಭಾವನೆಗಳಿಗೆ ಬೆಳಕು ನೀಡುವ ಮನಸ್ಸು ನಿಮ್ಮಲ್ಲಿದ್ದರೆ ನನ್ನ ಸಂಪರ್ಕಿಸಿ.

ಮಂಗಳವಾರ ೯ ಡಿಸೆಂಬರ್ ೨೦೦೮

ಸೋಲುಗಳ ಸುಳಿಯಲ್ಲಿ ಬದುಕು - ನನ್ನ ಮಾತು


ಗುರುವಾರ ೧೩ ನವೆಂಬರ್ ೨೦೦೮

ನಿನ್ನಯ ಗುರುತು - ನನ್ನ ಕವನ

ನನ್ನ ಎದೆಯಲಿ ಮೂಡಿದ ನೆನೆಪು
ನಿನ್ನ ಒಲವಿನ ಗುರುತು ಕಣೇ
ಗಗನದಿ ಮಿನುಗುವ ಚುಕ್ಕಿಯು ಕೂಡ
ನಿನ್ನ ಕಂಗಳ ಪ್ರತಿಬಿಂಬ ಕಣೇ


ಅರಳಿದ ತಾವರೆ ಎಲೆಗಳ ಮೇಲೆ
ನಾಟ್ಯವಾಡುವ ಪುಟ್ಟ ಇಬ್ಬನಿಯೇ
ದುಂಬಿಯ ರಂಜಿಸಿ ಗಮಗಮ ಎನ್ನುವ
ಹೂವಿನ ಪರಿಮಳ ಮಕರಂದವು ನೀ


ನಿನ್ನ ಹೃದಯದಿ ನೆಲೆಸಿರುವ
ನನ್ನ ಮನಸ್ಸನ್ನು ನಾ ಕಂಡೆ ಕಣೇ
-ಮಾ.ಕೃ.ಮಂಜು

ಶನಿವಾರ ೧ ನವೆಂಬರ್ ೨೦೦೮

ಕನಸ್ಸು - ನನ್ನ ಕವನ

ಕನಸ್ಸು
ಕನಸ್ಸಲ್ಲಿ ಬರುವವಳು
ಸದಾ ನನ್ನ ಕಾಡುತಿಹಳು
ಪ್ರೀತಿಯ ಕೊಟ್ಟವಳು
ಹೃದಯದಿ ನೆಲೆಸಿಹಳು
*********************
ನನ್ನವಳು ನನಗೆಲ್ಲಾ
ಪ್ರೀತಿಯ ತೊರೆದಿಲ್ಲ
ನೆನಪನ್ನು ಮರೆತಿಲ್ಲ
ಕನಸ್ಸಾಗಿ ಉಳಿದಳಲ್ಲ
**********************
ನನ್ನ ಮೇಲೆ ತೋರದಿರು ಕೋಪ
ಸಹಿಸಲಾರೇ ಅದರ ತಾಪ
ಬಿಟ್ಟುಬಿಡು ಈ ನಿನ್ನ ಮುಂಗೋಪ
ಮಾಡುತ್ತಿರುವೇ ಸದಾ ನಿನ್ನದೇ ಜಪ
**ಮಾ.ಕೃ.ಮಂಜು**

ಹಲ್ಮಿಡಿ ಶಾಸನ

ಕನ್ನಡದ ಮೊಟ್ಟ ಮೊದಲ ಶಾಸನ ಈ ಹಲ್ಮಿಡಿ ಶಾಸನ. ಕ್ರಿ.ಶ. ೪೫೦ ರ ಸುಮಾರಿನಲ್ಲಿ ಕದಂಬರ ಕಾಕುತ್ಸ್ಥವರ್ಮನ ಕಾಲದಲ್ಲಿ ರಚಿತವಾದ ಈ ಶಾಸನವಾಗಿದೆ. ಕರ್ನಾಟಕದ ಹಾಸನ ಜಿಲ್ಲೆಯ ಹಲ್ಮಿಡಿ ಗ್ರಾಮದಲ್ಲಿ ದೊರೆತಿರುವುದರಿಂದ ಇದನ್ನು ಹಲ್ಮ್ಡಿಡಿ ಶಾಸನ ಎನ್ನುತ್ತಾರೆ.

ಶುಕ್ರವಾರ ೩೧ ಅಕ್ಟೋಬರ್ ೨೦೦೮

ಕನ್ನಡ ನಾಡಿನ ಜನ್ಮದಿನದ ಶುಭಾಶಯಗಳು


ಸಮಸ್ತ ಕನ್ನಡಿಗರಿಗೆ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು. ಈ ಕನ್ನಡದ ಹಬ್ಬವು ನವೆಂಬರ್ ತಿಂಗಳಿಗೆ ಮಾತ್ರ ಸಿಮೀತವಾಗಿರದೇ ಸದಾ ಕಾಲ ಕನ್ನಡದ ಕಂಪು ತುಂಬಿರಲಿ ಎಂದು ಹಾರೈಸುತ್ತೇನೆ. ಈ ದಿನ ಕನ್ನಡಿಗರು ಸುವರ್ಣಾಕ್ಷರಗಳಲ್ಲಿ ಬರೆದಿಡುವ ದಿನವಾಗಿದೆ. ಸಪ್ತ ಜ್ಞಾನಪೀಠ ಪಡೆದ ಏಕೈಕ ಭಾಷೆಗೆ ಈಗ ಶಾಸ್ತ್ರೀಯ ಭಾಷೆಯ ಸ್ಥಾನಮಾನದ ಗರಿ ಸೇರಿದೆ. ಕಸ್ತೂರಿ ಕನ್ನಡ ವಿಶ್ವ ಮಟ್ಟದಲ್ಲಿ ಬೆಳಗಲಿ ಎಂದು ಹಾರೈಸುತ್ತೇನೆ. ಮತ್ತೊಮ್ಮೆ ೫೩ನೇ ಕನ್ನಡ ರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳು.. ಜೈ ಕರ್ನಾಟಕ ಮಾತೆ................ ಜೈ ಕನ್ನಡ........


ಮಂಗಳವಾರ ೨೧ ಅಕ್ಟೋಬರ್ ೨೦೦೮

ಅಳಿಯದ ನೆನಪು - ನನ್ನ ಕವನ

ಹೃದಯದಿ ಮೂಡಿದ ಭಾವನೆಗಳು
ಅವುಗಳೇ ನಿನ್ನಯ ನೆನಪುಗಳು
ನೆನಪಿನ ಪುಟಗಳ ಅಂಚಿನಲಿ
ಮೂಡಿದೆ ಸುಂದರ ಕನಸುಗಳು


ಸಾವಿರ ಕನಸ್ಸಿನ ಹಾಳೆಯಲಿ
ಜಾರಿ ಹೋಗದಿರಲಿ ನಿನ್ನ ಮಾತುಗಳು
ಯಾವ ಮೋಡಿಯಲಿ ನೀ ಸಿಲುಕಿರುವೆಯೋ
ನನ್ನ ಮನಸ್ಸ ನೀ ಮರೆತಿರುವೆ

ಗುಡುಗು ಸಿಡಿಲು ಬಂದರೂ ಸರಿಯೇ
ನಿನ್ನ ನೆನಪು ಅಳಿಯುವುದೇ?
ಲೋಕದ ಸೃಷ್ಟಿಗೆ ದೇವರ ಕೃಪೆಯು
ನನ್ನ ಕವನಕ್ಕೆ ನೀ ಸ್ಪೂರ್ತಿಯು
-ಮಾಕೃಮ

ಬುಧವಾರ ೧೫ ಅಕ್ಟೋಬರ್ ೨೦೦೮

ಮೌಲ್ಯ - ನನ್ನ ಕವನ

ಒಬ್ಬ ಪ್ರೇಮಿ ತನ್ನ ಪ್ರಿಯತಮೆಗೆ,
ನೀ ಇಲ್ಲದ ನನ್ನ ಬಾಳು
ಪಲ್ಲವಿ ಇಲ್ಲದ ಚರಣದಂತೆ
ಚಂದ್ರನಿಲ್ಲದ ಭೂಮಿಯಂತೆ
ಉಸಿರಿಲ್ಲದ ದೇಹದಂತೆ
ಎಂದು ವರ್ಣಿಸಿದರೆ,

ಆ ಪ್ರಿಯತಮೆ ಈತನಿಗೆ,
ನೀ ಇಲ್ಲದ ನನ್ನ ಬಾಳು
ಹಣವಿಲ್ಲದ ಕಿಸೆಯಂತೆ
ಬ್ಯಾಲೆನ್ಸ್ ಇಲ್ಲದ ಎ.ಟಿ.ಎಮ್ ಕಾರ್ಡ್ ನಂತೆ
ಕರೆನ್ಸಿ ಇಲ್ಲದ ಮೊಬೈಲ್ ನಂತೆ
ಎನ್ನುತ್ತಾಳೆ,.
-ಮಾಕೃಮ-

ಭಾವನೆಯ ಹಕ್ಕಿ - ನನ್ನ ಕವನ

ಭಾವನೆಯ ಹಕ್ಕಿ
ಭಾವನೆಯ ಹಕ್ಕಿಯು ಹಾಡುತ್ತಿದೆ
ಮನಸ್ಸಿನ ಮಾತನು ಹೇಳುತ್ತಿದೆ
ಬದುಕಿನ ಸುಂದರ ಪುಟಗಳಲ್ಲಿ
ಕನಸ್ಸಿನ ಸಾವಿರ ಪುಟಗಳನು

ಕಲ್ಲು - ಮುಳ್ಳಿನ ಬಾಳಿಗೆ
ಪ್ರೀತಿ ಮಮತೆಯ ಆಶ್ರಯವು
ನೋವು ನಲಿವುಗಳ ಬಡಿತಕೆ
ತಾಳ್ಮೆ ಬಾಳಿನ ಜೊತೆಗೆರಲಿ

ಮನಸಿನ ದುಃಖವ ನುಂಗಿ
ನಗುವಿನ ದೀಪವ ಹಚ್ಚಿದೆ
ಯಾರು ಕಾಣದ ಅಂತರಂಗದಿ
ಮೌನದ ಮಾತುಗಳು ಹೊರಡುತ್ತಿವೆ
-ಮಾಕೃಮ-

ಹೆಣ್ಣು - ನನ್ನ ಕವನ

ಹೆಣ್ಣಿನ ಮಾಯಾ ಮೋಹಕ್ಕೆ
ಸಿಲುಕದವರಿಲ್ಲ ಜಗತ್ತಿನಲ್ಲಿ
ಆದಿಯ ಸೃಷ್ಟಿಕರ್ತಳು ಇವಳು
ಅಂತ್ಯದ ರೂವಾರಿಯು ಆಗಬಲ್ಲಳು

ರಾಜ ಮಹಾರಾಜರು ಇವಳಿಗಾಗಿ
ಹರಿಸಿದರು ರಕ್ತದ ಕೋಡಿ
ಆದರೂ ಯಾರಿಗೂ ತಿಳಿಯುತ್ತಿಲ್ಲ
ಇವಳ ಮನಸ್ಸಿನ ಮರ್ಮದ ಮೋಡಿ

ರಾಜ್ಯ ಕಟ್ಟಲು ಇವಳೇ ಸ್ಪೂರ್ತಿ
ರಾಜ್ಯ ನಿರ್ನಾಮಕ್ಕೂ ಇವಳೇ ಕುತಂತ್ರಿ
ಏನೇ ಇದ್ದರೂ ಬದುಕಿನಲ್ಲಿ
ಇವಳದೇ ಕಾರುಬಾರು.
-ಮಾಕೃಮ-

ನಮ್ಮ ಕನ್ನಡ ನಾಡು - ನನ್ನ ಕವನ

ಕನ್ನಡ ನಾಡಿನ ಅಂದವ ನೋಡ
ಸಾಹಿತ್ಯ ಸಂಸ್ಕೃತಿಯ ಕಲೆ ಬೀಡ
ಮನ ತಣಿಸುವ ಹಚ್ಚ ಹಸಿರು
ಮಲೆನಾಡಿನ ಸೌಂದರ್ಯದುಸಿರು

ಜೋಗಿನ ಜಲಪಾತದ ಸೊಬಗಿನ ಇಂಪು
ಪಂಚ ಕೋಟಿ ಜನರಾಡುವ ಕನ್ನಡದ ಕಂಪು
ಬೇಲೂರು ಹಳೇಬೀಡು ಮೈಸೂರು
ಸದಾ ಆಕರ್ಷಿಸಿಸುವ ತವರೂರು

ಸುಂದರ ಇತಿಹಾಸ ಸೃಷ್ಟಿಸಿದ ನಾಡು
ಕಲೆ ವಾಸ್ತುಶಿಲ್ಪ ಸಾಹಿತ್ಯದ ಬೀಡು
ವಿದೇಶಿಯರು ಹೊಗಳುವ ಮೈಸೂರು ದಸರ
ನಾಡಿನ ಜನತೆಯ ಸಂತಸದ ಸಡಗರ

ನಾಡನ್ನು ಕಟ್ಟಿದ ರಾಜರ ವೈಭವ
ಕವಿಗಳು ರಚಿಸಿದ ಸಾಹಿತ್ಯ ಭಂಡಾರ
ಪ್ರವಾಸಿಗರ ಕೈ ಬೀಸಿ ಕರೆಯುವ ತಾಣ
ನೆಲೆಯೂರಲು ಯೋಗ್ಯವಾದ ವಾಸಸ್ಥಾನ

ನೀ ಒಮ್ಮೆ ಬಂದು ನೋಡು ಬಾರ
ಕನ್ನಡನಾಡಿನ ಅಂದವ ಸವಿಯಬಾರ
-ಮಾಕೃಮ*

ಅಮೃತ ಮುತ್ತು - ನನ್ನ ಕವನ




ಅಮ್ಮನು ಕೊಟ್ಟ ಕೈ ತುತ್ತು
ಮರೆಯಲಾಗದ ಅಮೃತ ಮುತ್ತು
ಅಮ್ಮ ಮಗುವಿನ ಮೊದಲ ಸವಿ ನುಡಿಯು
ಅಮ್ಮ ಎನ್ನಲು ಅಮೃತ ಸವಿದಂತೆ

ಅವಳಾಡುವ ಪ್ರೀತಿಯ ಮಾತು
ಮಕ್ಕಳಿಗೆ ಸದಾ ಹರ್ಷದಾಯಕವು
ಸಾವಿಗೆ ಅಂಜದೇ ಕೊಟ್ಟಳು ಜನ್ಮ
ಈ ಋಣವ ತೀರಿಸಲು ಸಾಲದು ಈ ಜನ್ಮ

ದೇವರು ಕರುಣಿಸಿದ ಮಾತೆಯು
ಮಕ್ಕಳ ಪಾಲಿನ ದೇವತೆಯು
ಮಮತೆಯ ಕರುಣಾಮಯಿಯು
ನನ್ನ ಪಾಲಿನ ಸೌಭಾಗ್ಯ ದೇವತೆಯು
-ಮಾ.ಕೃ.ಮ*

ರವಿವಾರ ೫ ಅಕ್ಟೋಬರ್ ೨೦೦೮

ಅನಾಥ ಮಗುವಾದೆ ನಾನು - ಹೊಸ ಜೀವನ


ನನ್ನನ್ನು ಸದಾ ಕಾಡುತ್ತಿರುವ ಗೀತೆ.

[ಹೆಣ್ಣು]ಉಳ್. ಳ್ ಳ್ ಳ್... ಆಯಿ ಆಯಿ.....
ಮೇಲೆ ನೋಡೊ ಕಂದ
ಚಂದಮಾಮ ನಗ್ತಾನೆ
ಕಣ್ಣು ಮುಚ್ಚೊ ಕಂದ
ನಿದ್ದೆ ಗುಮ್ಮ ಬರ್ತಾನೆ
ಉಳ್.. ಳ್ ಳ್ ಳ್.... ಆಯಿ ಆಯಿ.....
[ಗಂಡು]ಅನಾಥ ಮಗುವಾದೆ ನಾನು
ಅಪ್ಪನು ಅಮ್ಮನು ಇಲ್ಲ
ಅಣ್ಣನು ತಮ್ಮನು ಇಲ್ಲ
ಭಿಕಾರಿ ದೊರೆಯಾದೆ ನಾನು
ಅತ್ತರೆ ಮುದ್ದಿಸೋರಿಲ್ಲ
ಸತ್ತರೆ ಹೊದ್ದಿಸೋರಿಲ್ಲ
ಎಂಜಲೇ ಮೃಷ್ಟಾನ್ನವಾಯ್ತು
ಬೈಗಳೇ ಮೈಗೂಡಿ ಹೋಯ್ತು
ಈ ಮನಸೇ ಕಲ್ಲಾಗಿ ಹೋಯ್ತು

ಬೀದಿಗೆ ಒಂದು ನಾಯಿ ಕಾವಲಂತೆ
ನಾಯಿಗೂ ಒಂದು ರೊಟ್ಟಿ ಮೀಸಲಂತೆ
ನಾಯಿಗೂ ಹೀನವಾದೆ ನಾ..
ಮಾಳಿಗೆಗೆ ಒಂದು ಬೆಕ್ಕು ಕಾವಲಂತೆ
ಬೆಕ್ಕಿಗೂ ನಿತ್ಯ ಹಾಲು ತುಪ್ಪವಂತೆ
ಬೆಕ್ಕಿಗಿಂತ ಕೆಟ್ಟ ಶಕುನ ನಾ..
ತಿಂದೋರು ಎಲೆಯ ಬಿಸಾಡೋ ಹಾಗೆ
ಹೆತ್ತೋಳು ನನ್ನ ಎಸೆದಾಯ್ತು
ಸತ್ತೋರ ಎಡೆಯ ಕಾಗೆಗೆ ಇರಿಸಿ
ಹೆತ್ತೋರ ಕೂಗಿ ಕರೆದಾಯ್ತು
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲಕೇಳೋ ದೇವನೇ ೧
ಹುಟ್ಟೋ ಮಕ್ಕಳೆಲ್ಲ ತೂಗೋ ತೊಟ್ಟಿಲಲ್ಲಿ
ನನ್ನನಿಟ್ಟರಲ್ಲ ತಿಪ್ಪೆ ತೊಟ್ಟಿಯಲ್ಲಿ
ನಾನು ಏನು ಪಾಪ ಮಾಡಿದೆ?
ಅರ್ಧ ರಾತ್ರಿಯಲ್ಲಿ ಅರ್ಧ ನಿದ್ದೆಯಲ್ಲಿ
ತಾಯಿ ಹಾಲು ಎಲ್ಲಿ? ಲಾಲಿ ಹಾಡು ಎಲ್ಲಿ?
ನಾನು ಯಾವ ದ್ರೋಹ ಮಾಡಿದೆ?
ಭೂಮಿಯ ತುಂಬ ಅನಾಥರೆಂಬ
ಕೋಟ್ಯಾನುಕೋಟಿ ಕೂಗು ಇದೆ
ಗ್ರಾಚಾರ ಬರೆಯೋ ಓ ಬ್ರಹ್ಮ ನಿನಗೆ
ಎಂದೆಂದೂ ಅವರ ಶಾಪ ಇದೆ
ಉತ್ತರ ಇಲ್ಲ ಪ್ರಶ್ನೆಯೇ ಎಲ್ಲಹೇಳೋ ದೇವನೇ ೨
ಸಾಹಿತ್ಯ ಮತ್ತು ಸಂಗೀತ : ಹಂಸಲೇಖಗಾಯನ : ಕೆ .ಜೆ. ಯೇಸುದಾಸ್, ಚಂದ್ರಿಕಾ ಗುರುರಾಜ್

ಶುಕ್ರವಾರ ೨೬ ಸಪ್ಟೆಂಬರ್ ೨೦೦೮

ನನ್ನ ಹಳ್ಳಿ - ನನ್ನ ಕವನ


ನನ್ನ ಹಳ್ಳಿ
ಹಳ್ಳಿಯ ಸೌಂದರ್ಯ ಸೊಬಗು
ಹಚ್ಚ ಹಸಿರಿನ ಕಾಂತಿಯ ಮೆರಗು
ದಟ್ಟವಾದ ಮರಗಳ ಸಾಲು
ಪ್ರಕೃತಿಯ ಉಳಿವಿಗೆ ಇದರ ಸವಾಲು

ತಣ್ಣನೆಯ ಗಾಳಿಯ ತಂಪು
ಸೊಗಸಾದ ಹಕ್ಕಿಯ ಧ್ವನಿಯ ಇಂಪು
ಸತ್ಯ ನಿಷ್ಟತೆಗೆ ಹೆಸರಾದ ಜನ
ಮೋಸವರಿಯದ ಮುಗ್ಧ ಜನ

ಅಜ್ಜಿಯು ಹೇಳುವ ಚೆಂದದ ಕಥೆ
ಮಾಸಿಹೋದ ನೆನಪುಗಳ ವ್ಯಥೆ
ಜನರಾಡುವ ಕಸ್ತೂರಿ ಕನ್ನಡ
ಕೇಳಲು ನಿಂತರೆ ಮಹಾದಾನಂದ

ಉಳಿದಿದೆ ಸಂಸ್ಕೃತಿಯ ಬೇರು
ಸರ್ವರೂ ಒಂದಾಗಿ ಬಾಳುವ ಊರು
ಹುಟ್ಟಿದರೆ ಹುಟ್ಟಬೇಕು ಹಳ್ಳಿಯಲಿ
ಸೌಂದರ್ಯ ಸಾರುವ ಶಾಂತಿಧಾಮದಲಿ
-* ಮಾ.ಕೃ.ಮ*

ಶುಕ್ರವಾರ ೧೯ ಸಪ್ಟೆಂಬರ್ ೨೦೦೮

ಪ್ರಶೋತ್ತರ ಭಾಗ ೨

೧. ’ಶಬ್ದಾವತಾರ’ ಎಂಬ ಸಂಸ್ಕೃತ ವ್ಯಾಕರಣ ಕೃತಿ ರಚಿಸಿದ ಗಂಗರ ದೊರೆ ಯಾರು?
ಉತ್ತರ : ದುರ್ವಿನೀತ

೨. ಎ.ಕೆ. ರಾಮಾನುಜನ್ ರವರು ಇಂಗ್ಲೀಷ್ ಗೆ ಅನುವಾದಿಸಿದ ಅನಂತಮೂರ್ತಿಯವರ ಕಾದಂಬರಿ?
ಉತ್ತರ : ಸಂಸ್ಕಾರ

೩. ’ಇಂದಿರಾಬಾಯಿ’ ಕಾದಂಬರಿಯ ಪರ್ಯಾಯ ಶೀರ್ಷಿಕೆ ಯಾವುದು?
ಉತ್ತರ : ಸದ್ಧರ್ಮ ವಿಜಯ

೪. ’ವಿಕ್ರಮಾರ್ಜುನ ವಿಜಯ’ದಲ್ಲಿರುವ ಒಟ್ಟು ಆಶ್ವಾಸ ಮತ್ತು ಪದ್ಯಗಳೆಷ್ಟು?
ಉತ್ತರ : ೧೪ ಆಶ್ವಾಸ - ೧೬೦೯ ಪದ್ಯ

೫. ರಾಷ್ಟ್ರಕವಿ ಕುವೆಂಪುರವರನ್ನು ’ಆಧುನಿಕ ವಾಲ್ಮೀಕಿ’ ಎಂದು ಕರೆದ ಭಾರತದ ಸಂತ, ಸಮಾಜ ಸುಧಾರಕ ಯಾರು?
ಉತ್ತರ : ವಿನೋಭಾ ಭಾವೆ

೬. ನಾಗವರ್ಮನ ’ಕರ್ಣಾಟಕ ಕಾದಂಬರಿ’ ಕೃತಿಯಲ್ಲಿ ವರ್ಣಿತವಾಗಿರುವ ಸರೋವರ?
ಉತ್ತರ : ಅಚ್ಛೋದ ಸರೋವರ

೭. ಶ್ರೀ ಮಧ್ವಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?
ಉತ್ತರ : ದ್ವೈತ

೮. ’ತಿರುಕ’ ಕಾವ್ಯನಾಮವುಳ್ಳ ಕವಿಯ ಪೂರ್ಣ ಹೆಸರೇನು?]
ಉತ್ತರ : ಮಲ್ಲಾಡಿಹಳ್ಳಿ ರಾಘವೇಂದ್ರಸ್ವಾಮಿ

೯. ’ಭಾರತೀಯ ನಾಟ್ಯರಂಗ’ ಪ್ರಶಸ್ತಿ ಪಡೆದ ಗಿರೀಶ್ ಕಾರ್ನಾಡರ ನಾಟಕ ಯಾವುದು?
ಉತ್ತರ : ಹಯವದನ

೧೦. ಶ್ರೀ ಪಾದರಾಜರ ಕೀರ್ತನೆಗಳ ಅಂಕಿತ ಯಾವುದು?
ಉತ್ತರ : ಶ್ರೀರಂಗವಿಠಲ

ಗುರುವಾರ ೧೮ ಸಪ್ಟೆಂಬರ್ ೨೦೦೮

ರಂಗಿನ ಚಿಟ್ಟೆ - ನನ್ನ ಕವನ

ರಂಗಿನ ಚಿಟ್ಟೆ

ರಂಗು ರಂಗಿನ ಬಣ್ಣದ ಚಿಟ್ಟೆ
ಅದರ ಹಿಂದೆ ನನ್ನ ಮನಸ್ಸನ್ನು ಹಾರಿಬಿಟ್ಟೆ
ನನ್ನ ಹೃದಯವ ಅದಕ್ಕೆ ಕೊಟ್ಟೆ
ನಾನೊಂದು ಗಾಳಿಪಟವಾಗಿ ಬಿಟ್ಟೆ

ಸದಾ ಕನಸ್ಸಿನಲ್ಲಿ ತೇಲುತ್ತಿದ್ದೆ
ಬಣ್ಣ ಬಣ್ಣದ ರೆಕ್ಕೆಯ ಜೋಡಿಸಿದೆ
ಸುಂದರ ಪ್ರಪಂಚವ ಸೃಷ್ಟಿಸಿದೆ
ಪ್ರೀತಿಯ ಅಂಕುರವ ಅದಕ್ಕಿಟ್ಟಿದ್ದೆ


ಇದು ಮನಸ್ಸಿನ ಮಾಯಾಲೋಕ
ರಮಣೀಯವಾಗಿರುವ ಪ್ರೇಮಲೋಕ
ಕನಸ್ಸುಗಳ ಸೃಷ್ಟಿಯ ಬ್ರಹ್ಮ ಲೋಕ
ಊಹೆಗೂ ಮೀರಿದ ಕಲ್ಪನಾಲೋಕ


ಹುಡುಕುತ್ತಿರುವೆ ಈ ಪ್ರೀತಿಯ ಮೂಲವೆಲ್ಲಿ
ಕರಗಿಹೋದ ಸುಂದರ ಕ್ಷಣಗಳಲ್ಲಿ
ಅದ್ಭುತವೆನ್ನುವ ಕಿನ್ನರಲೋಕದಲ್ಲಿ
ಮರೆಯಾದ ಕಲ್ಪನಾ ಸಾಮ್ರಾಜ್ಯದಲ್ಲಿ


ಪ್ರೀತಿ-ಪ್ರೇಮವೇ ಲೋಕದ ಸೃಷ್ಟಿಗೆ ಮೂಲ
ಮತ್ತೆ ಸಿಗದು ಕಳೆದುಹೋದ ಕಾಲ
ಭೇದಿಸಲಾಗದು ಪ್ರೀತಿಯ ಮಾಯಾಜಾಲ
ನಿಗೂಢವಾಗಿಯೇ ಉಳಿದಿದೆ ಈ ಇಂದ್ರಜಾಲ

-.ಮಾ.ಕೃ.ಮ

ಓ ನನ್ನ ಜೀವವೇ -ನನ್ನ ಕವನ


ಓ ನನ್ನ ಜೀವವೇ

ಹೃದಯದ ಪ್ರೀತಿಯ ಕಲರವ
ಎನೋ ಕಳೆದುಹೋದ ಅನುಭವ
ಎದೆಯಲಿ ಪ್ರೀತಿಯ ಕಂಪನ
ಸದಾ ಜಿನುಗುವ ಸಿಂಚನ

ಸದಾ ಕಾಡುತ್ತಿದೆ ನಿನ್ನ ನೆನಪು
ಮಾಸಿಹೋದ ನೆನಪುಗಳ ಇಂಪು
ನಾ ಹುಡುಕುತ್ತಿರುವೆ ಆನಂದ
ದುಃಖವಿರದ ಸುಖದಲ್ಲಿಂದ

ಮನವು ಹಕ್ಕಿಯಂತೆ ಹಾರುತಿರಲಿ
ಅಂತ್ಯವಿರದ ಪ್ರೀತಿಯ ದಿಗಂತದಲಿ
ನವಿಲಿನಂತೆ ನಲಿಯುತ್ತಿದೆ ಮನಸ್ಸು
ನನಸ್ಸಾಗುವುದೇ ನನ್ನ ಕನಸ್ಸು

ಸದಾ ಮಾಡುತ್ತಿರುವೆ ನಿನ್ನ ಮನನ
ನೀ ಕೃಪೆ ತೋರಿದರೆ ನಾ ಪಾವನ
ನಾ ಬೆದರುವೆ ನನ್ನ ಆತ್ಮಕ್ಕೆ
ಧೈರ್ಯ ಕಳೆದುಹೋದ ಈ ಕ್ಷಣಕ್ಕೆ

ಮನದಲ್ಲಿ ಹುಟ್ಟಿತು ಈ ಕವನ
ನಾ ಮಾಡಲೇನು ಇದರ ವಾಚನ
- *ಮಾ.ಕೃ.ಮಂಜು*

ಪ್ರಶೋತ್ತರ ಭಾಗ ೧

೧. "ದೇವರಿಲ್ಲದ ಗುಡಿ" ಪ್ರವಾಸ ಕಥನದ ಕತೃ ಯಾರು?
ಉತ್ತರ : ಬೀchi

೨. ಕನ್ನಡದಲ್ಲಿ ಮೊದಲು ಪ್ರವಾಸ ಸಾಹಿತ್ಯವನ್ನು ಆರಂಭಿಸಿದವರು ಯಾರು?
ಉತ್ತರ : ವಿ. ಸೀತಾರಾಮಯ್ಯ

೩. "ಜಾನಪದ ಲೋಕ" ಎಲ್ಲಿದೆ?
ಉತ್ತರ : ರಾಮನಗರ ಬಳಿಯಿದೆ

೪. ಕನ್ನಡದಲ್ಲಿ "ಮಕ್ಕಳ ಸಾಹಿತ್ಯ ಪಿತಾಮಹ" ಎಂದು ಯಾರಿಗೆ ಹೇಳುತ್ತಾರೆ?
ಉತ್ತರ :ಪಂಜೆ ಮಂಗೇಶರಾವ್

೫. "ಸಾವಿರ ಹಾಡಿನ ಸರದಾರ" ಎಂದು ಖ್ಯಾತರಾಗಿರುವ ಗಾಯಕ ಯಾರು?
ಉತ್ತರ: ಬಾಳಪ್ಪ ಹುಕ್ಕೇರಿ
೬. ಕನ್ನಡ ಸಾಹಿತ್ಯ ಸಮ್ಮೇಳನದ ಮೊಟ್ಟ ಮೊದಲ ಮಹಿಳಾ ಅಧ್ಯಕ್ಷರು ಯಾರು?
ಉತ್ತರ: ಜಯದೇವಿತಾಯಿ ಲಿಗಾಡೆ

೭. "ಕರ್ನಾಟಕ ಸಿಂಹಾಸನ ಪ್ರತಿಷ್ಠಾಪನಾಚಾರ್ಯ"ರೆಂದು ಯಾರಿಗೆ ಕರೆಯುತ್ತಾರೆ?
ಉತ್ತರ : ವಿದ್ಯಾರಣ್ಯರು

೮. "ಕನ್ನಡ" ಎಂಬ ಹೆಸರಿನ ಊರು ಎಲ್ಲಿದೆ?
ಉತ್ತರ : ಮಹಾರಾಷ್ಟ್ರದಲ್ಲಿದೆ

೯. ಕನ್ನಡ ಚಿತ್ರರಂಗದ ಪ್ರಪ್ರಥಮ ನಾಯಕ ನಟ ಯಾರು?
ಉತ್ತರ : ಸುಬ್ಬಯ್ಯ ನಾಯ್ಡು

೧೦. ೬೯ನೇ ಕನ್ನಡ ಸಾಹಿತ್ಯ ಸಮ್ಮೇಳನ ಯಾವ ಊರಿನಲ್ಲಿ ನಡೆಯಿತು?
ಉತ್ತರ : ತುಮಕೂರು