Feb 9, 2016

ಮಾನವೀಯತೆ

ಎಲ್ಲರೂ ಓದಲೇ ಬೇಕಾದ ಒಂದು ಸುಂದರ ಕಥೆ..

ಇಬ್ಬರು ಬಾಲ್ಯಸ್ನೇಹಿತರು.. ಒಟ್ಟಿಗೆ ಓದಿದವರು , ಒಟ್ಟಿಗೆ ಬೆಳೆದವರು.. ಒಬ್ಬ ಧನಿಕ , ಇನ್ನೊvಬ್ಬ ಬಡವ..ಬಹಳ ಕಾಲದ ನಂತರ ಭೇಟಿಯಾಗುತ್ತಾರೆ.. ಕಷ್ಟ - ಸುಖ ಮಾತನಾಡುತ್ತ ದಾರಿಯಲ್ಲಿ ಸಾಗುತ್ತಿರುತ್ತಾರೆ..

ಧನಿಕ ಗೆಳೆಯ - 
"ಜೀವನದಲ್ಲಿ ನೀನೇನೂ ಬದಲಾಗಲೇ ಇಲ್ಲವಲ್ಲ ಗೆಳೆಯ.. ಅದೇ ತೆಳ್ಳಗಿನ ದೇಹ , ಅದೇ ನಗು , ಅದೇ ಬಡತನ.. ನನ್ನನ್ನು ನೋಡು.. ಎಷ್ಟು ಬದಲಾಗಿದ್ದೇನೆ.. ಜೀವನದಲ್ಲಿ ಎಲ್ಲವನ್ನೂ ಗಳಿಸಿದ್ದೇನೆ.. ಮನೆ , ಕಾರು , ಸಂಪತ್ತು ಎಲ್ಲ ನನ್ನ ಬಳಿ ಇವೆ.. ನಿನ್ನ ಜೀವನವೇಕೆ ಹೀಗಾಯ್ತು...?

ಬಡವ ಗೆಳೆಯ ಹಠಾತ್ತಾಗಿ ನಿಂತ..

ಧನಿಕ ಗೆಳೆಯ - "ಏನಾಯ್ತು?"

ಬಡವ ಗೆಳೆಯ - "ಏನೋ ಶಬ್ದ ಕೇಳಿಸಿತಲ್ಲ..?"

ಧನಿಕ ಗೆಳೆಯ - 
" ಓ ಅದಾ...? ನನ್ನ ಜೇಬಿನಿಂದ ನಾಣ್ಯ ಬಿದ್ದಿರಬಹುದು"

ಹುಡುಕಿದ.. ಐದು ರೂಪಾಯಿಯ ನಾಣ್ಯ ಕೆಳಗೆ ಬಿದ್ದಿತ್ತು. ಜೇಬಿಗೆ ಸೇರಿಸಿದ..

ಬಡವ ಗೆಳೆಯ ಅಲ್ಲಿಂದ ದೂರ ಹೋದ..ಏನನ್ನೋ ಹುಡುಕಿದ.. ದೊಡ್ಡ ಜೇಡದ ಬಲೆಯಲ್ಲೊಂದು ಹಕ್ಕಿಮರಿ ಸಿಕ್ಕಿ ಒದ್ದಾಡುತ್ತಿತ್ತು.. ಆತ ನಿಧಾನವಾಗಿ ಬಲೆಯಿಂದ ಬಿಡಿಸಿ , ಆಕಾಶಕ್ಕೆ ಹಾರಿಸಿದ..

ಧನಿಕಗೆಳೆಯ ಆಶ್ಚರ್ಯದಿಂದ "ಹಕ್ಕಿಯ ಧ್ವನಿ ನಿನಗೆ ಹೇಗೆ ಕೇಳಿಸಿತು..?"

ಬಡವ ಗೆಳೆಯ ಮುಗುಳ್ನಗುತ್ತಾ - " ಗೆಳೆಯ...ಇದೇ ನಮ್ಮಿಬ್ಬರ ನಡುವೆ ಇರುವ ಅಂತರ.. ನಿನಗೆ ಹಣದ ಧ್ವನಿ ಕೇಳಿಸಿತು.. ನನಗೆ ಮನದ ಧ್ವನಿ ಕೇಳಿಸಿತು.. ನಿನ್ನ ಮನ ಹಣದಾಸೆಯ ಬಲೆಯಲ್ಲಿ ಸಿಲುಕಿಕೊಂಡಿದೆ , ನನ್ನ ಮನ ಸ್ವತಂತ್ರ್ಯವಾಗಿ ಸಂತೋಷದಿಂದ ವಿಹರಿಸುತ್ತಿದೆ.. ನೀನು ಹಣದಾಸೆಯಲ್ಲಿ ಮಾನವೀಯತೆಯನ್ನೇ ಮರೆತಿದ್ದೀಯಾ.. ನಾನು ಮನದಲ್ಲಿ ಈಗಲೂ ಮಾನವೀಯತೆಯನ್ನು ಹೊಂದಿದ್ದೇನೆ.. ಮನದಲ್ಲಿ ಹಾಗೂ ಮಾನವೀಯತೆಯಲ್ಲಿರುವ ಸಂತೋಷವನ್ನು ಹಣ ಕೊಟ್ಟು ಖರೀದಿಸಲು ಸಾಧ್ಯವೇ..? ಈಗ ಹೇಳು ಗೆಳೆಯ.. 
ಯಾರು ಶ್ರೀಮಂತರು?"

ಧನಿಕಗೆಳೆಯ ಏನನ್ನೂ ಉತ್ತರಿಸಲಾಗದೇ ಸುಮ್ಮನಾದ...

ಹಣಗಳಿಕೆಯನ್ನೇ ಜೀವನದ ಪರಮಗುರಿಯನ್ನಾಗಿಸಿಕೊಂಡು , ಮಾನವೀಯತೆಯನ್ನು ಮರೆತಿರುವ ಮನುಕುಲಕ್ಕೆ ಈ ಕಥೆ ಮುಡಿಪು...

ಕೊಂಚ ಆಲೋಚಿಸಿ ನೋಡಿ●
"ಕೆಲವರು ಜಗಳವಾದ ತಕ್ಷಣ ಕ್ಷಮೆಯನ್ನು ಕೇಳುತ್ತಾರೆ
ಇದರರ್ಥ
ಅವರಿಗೆ ಬೇರೆಯಾರೂ ಸಿಗಲ್ಲ, ಅಥವಾ ತಪ್ಪು ಅವರದ್ದೇ
ಅಂತರ್ಥವಲ್ಲ ಬದಲಾಗಿ ಅವರು ಸಂಭಂದಕ್ಕೆ ಹೆಚ್ಚು ಬೆಲೆ
ಕೊಡುತ್ತಾರೆ ಅಂತರ್ಥ"

● ಕೊಂಚ ಆಲೋಚಿಸಿ ನೋಡಿ●
"ಕೆಲವರು ನಿಮಗೆ ಸಹಾಯಮಾಡಲು ಕರೆಯದೆ ಓಡಿಬಂದು
ಸಹಾಯ ಮಾಡುತ್ತಾರೆಂದರೆ ಇದರರ್ಥ ಅವರಿಗೆ ಬೇರೆ
ಕೆಲಸವಿಲ್ಲ ಅಂತರ್ಥವಲ್ಲ.
ಅವರಿಗೆ ನೋವಿನ ಬೆಲೆ, ಮಾನವೀಯತೆಯ ಬೆಲೆ ತಿಳಿದಿರುತ್ತೆ
ಅಂತರ್ಥ"

ಕೊಂಚ ಆಲೋಚಿಸಿ ನೋಡಿ●

"ನಿಮ್ಮಲ್ಲಿ ಕೆಲವರು ಪಾರ್ಟಿ ಕೊಟ್ಟು ಬಿಲ್ ಅನ್ನು ಅವರೇ
ಯಾವಾಗಲೂ ಕೊಡುತ್ತಾರೆ ಅಂದರೆ ಅವರಲ್ಲಿ
ಬೇಕಾದಷ್ಟು ಹಣ ಇದೆ ಅಂತ ಅರ್ಥವಲ್ಲ ಬದಲಾಗಿ
ಸ್ನೇಹಕಿಂತ / ಸಂಭಂಧಕ್ಕಿಂತ
ಹಣ ದೊಡ್ಡದಲ್ಲ ಅಂತ ಅವರ ಮನಸಲ್ಲಿರುತ್ತೆ"

ಕೊಂಚ ಆಲೋಚಿಸಿ ನೋಡಿ●
"ಕೆಲವರು ಯಾವಾಗಲು ನಿಮಗೆ ಮೆಸೇಜ್
ಮಾಡುತ್ತಾರೆಂದರೆ
ಕಾಲ್ ಮಾಡುತ್ತಿರುತ್ತಾರೆ ಅಂದರೆ ಅವರು
ಯಾವಾಗಲು ಫ್ರೀ ಇರುತ್ತಾರೆ ಅಂತರ್ಥವಲ್ಲ ಬದಲಾಗಿ
ಅವರು ಎಷ್ಟೇ ಬ್ಯುಸಿ ಇದ್ದರು ತಮ್ಮ ಹೃದಯದಲ್ಲಿದ್ದವರಿ
ಗೆ ಸಮಯವನ್ನು ನೀಡಲು ಬಯಸುತ್ತಾರೆ ಅಂತರ್ಥ"

● ಕೊಂಚ ಆಲೋಚಿಸಿ ನೋಡಿ●

"ಯಾರೋ ನಿಮಗಾಗಿ ಎಷ್ಟು ಹೊತ್ತಾದರೂ ಕಾಯಲು
ಸಿದ್ದರಿದ್ದಾರೆ ಎಂತಾದರೆ
ಅವರಿಗೆ ಮಾಡಲು ಬೇರೆ ಏನೂ ಕೆಲಸವಿಲ್ಲ ಎಂದರ್ಥವಲ್ಲ.
ಅವರ ದೃಷ್ಟಿಯಲ್ಲಿ ನಿಮಗಿಂತ
ಮಹತ್ವದ್ದು ಬೇರೇನೂ ಇಲ್ಲ ಎಂದು