Oct 8, 2013

ಮಾನವ ಜನ್ಮದ ಮಹತ್ವ

ಮಾನವ ಜನ್ಮದ ಮಹತ್ವ

ಭಾರತದಲ್ಲಿ ಇವತ್ತಿಗೂ ವೇದ, ಉಪನಿಷದ್, ಕಾವ್ಯ, ಮಹಾಕಾವ್ಯ, ನಾಟಕ, ಇತಿಹಾಸ, ಧರ್ಮಶಾಸ್ತ್ರ, ಮಾನವ ಜೀವನಕ್ಕೆ ಒಂದು ಭೂಮಿಕ ಅಥವಾ ಪಾಯವಾಗಿದೆ. ಇವೆಲ್ಲ  ಮುಖ್ಯವಾಗಿ  4 ಅಂಶಗಳನ್ನ ನಮಗೆ ತಿಳಿಸುತ್ತದೆ.
  1. ಧರ್ಮ
  2. ಅರ್ಥ 
  3. ಕಾಮ 
  4. ಮೋಕ್ಷ 
ಇದರಲ್ಲಿ ಮೊದಲು ಮೂರು ಯಾವ ರೀತಿ ಬದುಕಬೇಕು ಎಂದು ತಿಳಿಸಿದರೆ ,ಕೊನೇಯದು ಯಾವ ಕಾರಣಕ್ಕಾಗಿ ಬದುಕಬೇಕು ಎಂದು ತಿಳಿಸುತ್ತದೆ. ಮೋಕ್ಷವೇ ಮನುಷ್ಯನ ಗುರಿಯಾಗಬೇಕು ಎನ್ನುತ್ತದೆ ವೇದ. ಈ ಗುರಿ ಇಲ್ಲವಾದ ಬದುಕು ಪಶು ಬದುಕಿಗೆ ಸಮಾನವಾಗುವುದು. ವ್ಯತ್ಯಾಸ ಇಷ್ಟೇ, ಪಶು ಹಸಿವಾದಾಗ ಆಹಾರ ಹುಡುಕುತ್ತದೆ ದಣಿವಾದರೆ ನಿದ್ರಿಸುತ್ತದೆ. ಅವುಗಳಿಗೆ ಆ ಹೊತ್ತು ಕಳೆದರೆ, ಆ ದಿನ ಕಳೆದರೆ ಅಷ್ಟೇ ಸಾಕು. ಆದರೆ ಎಲ್ಲಾ ಜೀವಿಗಳಲ್ಲೂ ಶ್ರೇಷ್ಠ ಜೀವಿ ಎಂದು ಕರೆಯಲ್ಪಡುವ ಮನುಷ್ಯನಿಗೆ ಸ್ವಲ್ಪ ಮುಂದಾಲೋಚನೆ ಹೆಚ್ಚು. ಏನೆಂದರೆ ತಾನು ಎಷ್ಟು ಕಾಲ ಬದುಕಬೋಹದು ಏನೋ ಒಂದು  60 ಅಥವಾ 80 ವರ್ಷ. ಅದಿಕ್ಕೆ ಬೇಕಾಗೋ ಅಷ್ಟು ಆಸ್ಥಿ ಅಥವಾ ಉಳಿತಾಯ ಇರಬೇಕು. ಇಷ್ಟಿದ್ದರೆ ಪರವಾಗಿಲ್ಲ. ಆದರೇ ಇಷ್ಟಕ್ಕೆ ಸಮಾದಾನ ಆಗದೇ ನನ್ನ ಮಗ ಅಥವಾ ಮಗಳು ಸುಖವಾಗಿರಲು ಎಷ್ಟು ಇರಬೇಕು, ನನ್ನ ಮೊಮ್ಮಕ್ಕಳಿಗೆ, ಮರಿ ಮಕ್ಕಳು ಸುಖವಾಗಿರಲು ಎಷ್ಟು ಕೂಡಿಡಬೇಕು. ಇನ್ನಾ ಜೀವನ ಪೂರ್ತಿ ಸಂಪಾದನೆ ಮಾಡುತ್ತಾ ಇರುವುದೆ ಇವನ ಗುರಿ.

ಶಂಕರಾಚಾರ್ಯರು "ವಿವೇಕ ಚೂಡಾಮಣಿ" ಯಲ್ಲಿ ಮನುಷ್ಯ ಜನ್ಮದ ಬಗ್ಗೆ ಹೇಳುತ್ತಾ "ಮನುಷ್ಯ ಜನ್ಮ ಸಿಗುವುದೇ ಅದೃಷ್ಟ. ಅದರಲ್ಲೂ ಮನುಷ್ಯನಾಗಿ ಹುಟ್ಟಿ ಒಬ್ಬ ಪಂಡಿತನಾಗಿ ಶಾಸ್ತ್ರನ ಅಧ್ಯಯನ ಮಾಡ್ತಾ ಶಾಸ್ತ್ರೀಯ ಕರ್ಮಗಳನ್ನ ಆಚರಿಸುತ್ತಾ ಧನ್ಯನಾಗಿ, ಅಷ್ಟೇ ಅಲ್ಲದೇ ಧರ್ಮಕ್ಕಾಗಿ ಬದುಕುತ್ತಾ ಮೋಕ್ಷ ಸಾಧನೆಯೇ ಜೀವನದ ಗುರಿಯೆಂದು ಗುರುತಿಸಿ ಆ ದಾರಿಯಲ್ಲಿ ಹೋಗುವವನು ಬಹಳ ಉತ್ತಮವಾದವನು. ಆ ದಾರಿಯಲ್ಲೇ ಹೋಗಿ ಆ ಮೋಕ್ಷವನ್ನು ಪಡೆದವನು ಮಹಾನ್ ಆಗಿಬಿಡುತ್ತಾನೆ. ಹೇಗೆ ನದಿ ಹರಿದು, ಜಿಗಿದು ಸಮುದ್ರದಲ್ಲಿ ಸೇರಿ ಸಮುದ್ರವಾಗಿ ಬಿಡುತ್ತದೋ, ಹಾಗೇ ಮೋಕ್ಷ ಮಾರ್ಗ ಹಿಡಿದವನು ದೈವದಲ್ಲಿ ಲೀನವಾಗಿ ದೈವಾಂಶ ವಾಗಿಬಿದುತ್ತಾನೆ." ಅಂತಹ ಪುನ್ಯವಾದ ಜನ್ಮವನ್ನ ಪಡೆದು ನಾವು ಏನು ಸಾಧಿಸುತ್ತಿರುವುದಾದರೂ ಏನು? ಎಲ್ಲಿಗೋ ಹೋಗಬೇಕು, ಏನೋ ನೋಡಬೇಕು, ಏನೋ ಮಾಡಬೇಕು, ಏನೋ ತಿನ್ನಬೇಕು, ಏನೋ ಕುಡಿಯಬೇಕು, ಏನೋ ಸಂಪಾದಿಸಬೇಕು, ಏನೋ  ಕೂಡಿಡಬೇಕು, ಏನೋ ಬಚ್ಚಿಡಬೇಕು ಅಂತ ಬದುಕ್ತಾ ಇರುವರಿಗೆ ಶಾಸ್ತ್ರ ಒಂದು Guide or Map or Reference ಆಗಿ ನಮ್ಮ ಜೀವನಕ್ಕೆ ಬೇಕಿರೋದು ಇದಲ್ಲ ಅಂತ ಜೀವನ ವಿಧಾನನಾ ಮತ್ತು ಜೀವನ ಗುರಿನಾ ಎರಡಾಗಿ ವಿಂಗಡಿಸಿ ನಮಗೆ ತಿಳಿಸುತ್ತದೆ.

ಜೀವನ ವಿಧಾನ ಹೀಗೆ ಇರಬೇಕು ಅಂತ ಒಂದು fence ಹಾಕಿ ಅದರಲ್ಲಿ ಧರ್ಮ, ಅರ್ಥ ಮತ್ತು ಕಾಮಗಳನ್ನ ನಮ್ಮ ಮುಂದಿಟ್ಟಿದೆ. ಇನ್ನಾ ಮೋಕ್ಷ ಬಂದು ನಮ್ಮ ಜೀವನದ ಗುರಿ ಆಗಿಬಿಡುತ್ತದೆ. ಈ ನಾಲ್ಕನ್ನು ಪುರುಷಾರ್ಥ ಎನ್ನುತ್ತಾರೆ.
ಪುರುಷಾರ್ಥ ಅಂದರೆ ಒಂದು ಮಾನವ ಜೀವ ಅರ್ಥ ಮಾಡಿಕ್ಕೊಳ ಬೇಕಾದದ್ದು ಎಂದು. ಮನುಷ್ಯನಿಗೆ ಮಾತ್ರ ತಾನು ಏತಕ್ಕೆ ಹುಟ್ಟಿರುವೆ? ಏತಕ್ಕೆ ಬದುಕುತ್ತಿದ್ದಿನೆ?, ಒಂದು ದಿನ ಸತ್ತ ಮೇಲೆ ನಾನು ಸಾಧಿಸಿರುವುದಾದರು ಏನು? First of all, ಈ ಜೀವಕ್ಕೆ ಕಾರಣ ಏನು? ಹೀಗೆ ಆಲೋಚಿಸುವ ಪಕ್ವ ಬುದ್ಧಿ ಕೇವಲ ಮನುಷ್ಯನಿಗೆ ಮಾತ್ರ ವರವಾಗಿದೆ. ಇಂತಹ ಮೇಧಾವಿಗೆ ಹೇಗೆ ತನ್ನ ಜೀವನವನ್ನು ನಡೆಸಿಕೊಂಡು ಹೋಗಬೇಕು ಎಂದು ಶಾಸ್ತ್ರ ತಿಳಿಸುತ್ತದೆ.