Aug 24, 2012

ಶ್ರೀ ಜಿ.ವೆಂಕಟಸುಬ್ಬಯ್ಯನವರಿಗೆ 100 ವಸಂತ ತುಂಬಿದ ಸಂಭ್ರಮ !!



ಶ್ರೀ ಜಿ.ವೆಂಸುಬ್ಬಯ್ಯನವರ ಕಿರು ಪರಿಚಯ :






ಜನನ :
 ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಕೈಗೋನಹಳ್ಳಿಯಲ್ಲಿ 23ನೇ ಆಗಸ್ಟ್ 1913 ರಂದು
ತಂದೆ : ಶ್ರೀ ಗಂಜಾಂ ತಿಮ್ಮಣ್ಣಯ್ಯ
ತಾಯಿ : ಶ್ರೀಮತಿ ಸುಬ್ಬಮ್ಮ
ವಿದ್ಯಾಭ್ಯಾಸ :  ಮೈಸೂರು ವಿವಿಯಿಂದ ಎಂ.ಎ.
ನೌಕರಿ : ಮೈಸೂರು ಮಹಾರಾಜ ಕಾಲೇಜಿನಲ್ಲಿ ಉಪನ್ಯಾಸಕ ಹುದ್ದೆಗೆ ಸೇರಿ - ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ ಹುದ್ದೆಗೆ ಸೇರಿ ಪ್ರಾಂಶುಪಾಲರಾಗಿ ನಿವೃತ್ತಿ




ಕೃತಿಗಳು : 
  • ನಯನಸೇನ, 
  • ಅನುಕಲ್ಪನೆ, 
  • ನಳಚಂಪು,
  • ಅಕ್ರೂರ ಚರಿತ್ರೆ, 
  • ಲಿಂಡನ್ ಜಾನ್ಸನ್ ಕಥೆ, 
  • ಸಂಯುಕ್ತ ಸಂಸ್ಥಾನ ಪರಿಚಯ, 
  • ಶಂಕರಾಚಾರ್ಯ, 
  • ಕಬೀರ್, 
  • ಇದು ನಮ್ಮ ಭಾರತ, 
  • ಸರಳಾದಾಸ್, 
  • ರತ್ನಾಕರವರ್ಣಿ, 
  • ದಾಸಸಾಹಿತ್ಯ, 
  • ವಚನಸಾಹಿತ್ಯ, 
  • ಶಾಸನ ಸಾಹಿತ್ಯ, 
  • ಷಡಕ್ಷರ ದೇವ, 
  • ಸರ್ವಜ್ಞ, 
  • ಕನ್ನಡ-ಕನ್ನಡ ಇಂಗ್ಲೀಷ್ ನಿಘಂಟು, 
  • ಕನ್ನಡ-ಕನ್ನಡ ಕ್ಲಿಷ್ಟ ಪದಕೋಶ, 
  • ಇಂಗ್ಲೀಷ್-ಕನ್ನಡ ನಿಘಂಟು, 
  • ಹೊಯ್ಸಳ ಕರ್ನಾಟಕ ರಜತೋತ್ಸವ ಸಂಪುಟ, 
  • ಮುದ್ದಣ ಭಂಡಾರ ಭಾಗ-೧, 
  • ಮುದ್ದಣ ಭಂಡಾರ ಭಾಗ-೨, 
  • ಕಾವ್ಯಲಹರಿ, 
  • ಕನ್ನಡ ಸಾಹಿತ್ಯ ಬೆಳೆದು ಬಂದ ದಾರಿ, 
  • ಕನ್ನಡವನ್ನು ಉಳಿಸಿ ಬೆಳೆಸಿದವರು, 
  • ಪ್ರೊ|| ಟಿ.ಎಸ್. ವೆಂಕಣ್ಣಯ್ಯನವರು, 
  • ಕವಿ ಜನ್ನ, ಡಿ.ವಿ.ಗುಂಡಪ್ಪನವರು, 
  • ಕನ್ನಡದ ನಾಯಕಮಣಿಗಳು, 
  • ಕರ್ಣಕರ್ಣಾಮೃತ, 
  • ನಾಗರಸನ ಭಗವದ್ಗೀತೆ, 
  • ತಮಿಳು ಕತೆಗಳು, 
  • ಇಗೋ ಕನ್ನಡ-೧, 
  • ಇಗೋ ಕನ್ನಡ-೨, 
  • ಮುದ್ದಣ ಪದಪ್ರಯೋಗಕೋಶ, 
  • ಎರವಲು ಪದಕೋಶ, 
  • ಕುಮಾರವ್ಯಾಸನ ಅಂತರಂಗ
... ಮುಂತಾದವು

ಅಲಂಕರಿಸಿದ ಹುದ್ದೆಗಳು : 

  • ಕ.ಸಾ.ಪ. ಕಾರ್ಯದರ್ಶಿ
  • 1964 ರಿಂದ 1969 ರವರೆಗೆ ಕ.ಸಾ.ಪ. ಅಧ್ಯಕ್ಷ ಹುದ್ದೆ
  • ಕನ್ನಡ ಸುಡಿ ಪತ್ರಿಕೆಯ ಸಂಪಾದಕರಾಗಿ ಸೇವೆ
  • ಕನ್ನಡ-ಕನ್ನಡ ಕೋಶದ ಸಮಿತಿಯ ಅಧ್ಯಕ್ಷರು ಹಾಗೂ ಪ್ರಧಾನ ಸಂಪಾದಕರು
  • ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರು
  • ಅಖಿಲ ಭಾರತ ನಿಘಂಟುಕಾರರ ಸಂಘದ ಉಪಾಧ್ಯಕ್ಷರು
  • ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಮಿತಿಯ ಕನ್ನಡ ಪ್ರತಿನಿಧಿ
  • ಬೆಂಗಳೂರಿನಲ್ಲಿ ನಡೆದ ೭೭ ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು. 

... ಮುಂತಾದವು

ಬಿರುದುಗಳು :

  • ನಿಘಂಟು ಸಾರ್ವಭೌಮ, 
  • ಸಂಚಾರಿಜೀವಂತಪದಕೋಶ, 
  • ಭಾಷಾವಿಜ್ಞಾನ ಪ್ರವೀಣ, 
  • ಪದಗಳಕಣಜ, 
  • ನಿಘಂಟು ನಿಸ್ಸೀಮ, 
  • ಶಬ್ಧರ್ಷಿ, 
  • ಪದಜೀವಿ, 
  • ಪದಗುರು, 
  • ನಡೆದಾಡುವ ನಿಘಂಟು, 
  • ಶಬ್ದಸಂಜೀವಿನಿ, 
  • ಶಬ್ದಬ್ರಹ್ಮ, 
  • ಶಬ್ದಸಾಗರ, 
  • ಶಬ್ದಸಹಾಯವಾಣಿ, 
  • ಶಬ್ದಗಾರುಡಿಗ, 
  • ಶಬ್ದಶಿಲ್ಪಿ, 
  • ಚಲಿಸುವ ಜ್ಞಾನಭಂಡಾರ,
  • ಕನ್ನಡದ ಕಿಟ್ಟಲ್
... ಮುಂತಾದವು

ಪ್ರಶಸ್ತಿಗಳು :

  •  ಮುದ್ದಣ ಭಂಡಾರ ಗ್ರಂಥಕ್ಕೆ ೧೯೮೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ 
  • ಸಾಹಿತ್ಯ ಸಾಧನೆಗಾಗಿ ೧೯೯೧ ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 
  • ೧೯೯೨ ರಲ್ಲಿ ಮಾಂಟ್ರಿಯಲ್ ಕೆನಡದಲ್ಲಿ ನಡೆದ ಕನ್ನಡ ಸಮ್ಮೇಳನದ ಗೌರವ ಆತಿಥ್ಯ, 
  • ೧೯೯೭ ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿ, 
  • ೧೯೯೮ ರಲ್ಲಿ ಶಂಬಾ ಪ್ರಶಸ್ತಿ, 
  • ೧೯೯೯ ರಲ್ಲಿ ಸೇಡಿಯಾಪು ಪ್ರಶಸ್ತಿ, 
  • ೧೯೯೯ ರಲ್ಲಿ ಶಿವರಾಮ ಕಾರಂತ ಪ್ರಶಸ್ತಿ, 
  • ೨೦೦೦ ದಲ್ಲಿ ಕರ್ನಾಟಕ ಪತ್ರಿಕಾ ಅಕಾಡೆಮಿಯ ವಿಶೇಷ ಪ್ರಶಸ್ತಿ, 
  • ೨೦೦೧ ರಲ್ಲಿ ವನಮಾಲಿ ಪ್ರಶಸ್ತಿ, 
  • ೨೦೦೩ ರಲ್ಲಿ ಮುದ್ದಣ ಪುರಸ್ಕಾರ, 
  • ೨೦೦೫ ರಲ್ಲಿ ಮಾಸ್ತಿ ಪ್ರಶಸ್ತಿ, 
  • ೨೦೦೫ ರಲ್ಲಿ  ನಾಡೋಜ ಪ್ರಶಸ್ತಿ, 
  • ೨೦೦೭ ರಲ್ಲಿ ಮೂಡುಬಿದರೆಯ ಪ್ರತಿಷ್ಠಿತ ಆಳ್ವಾಸ್ ನುಡಿಸಿರಿಯ ಅಧ್ಯಕ್ಷತೆಯ ಗೌರವ, 
  • ೨೦೦೮ ರಲ್ಲಿ ಪ್ರತಿಷ್ಠಿತ ಅನಕೃ ನಿರ್ಮಾಣ್ ಸ್ವರ್ಣ ಪ್ರಶಸ್ತಿ, 
  • ೨೦೦೯ ರಲ್ಲಿ ಕರ್ನಾಟಕ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ, 
  • ೨೦೧೦ ರಲ್ಲಿ ಗೋಕಾಕ್ ವಾಙ್ಮಯ ಟ್ರಸ್ಟ್‌ನ ವಿ.ಕೃ. ಗೋಕಾಕ್ ಪ್ರಶಸ್ತಿ 
... ಮುಂತಾದವು

ಕೃಪೆ: ಸ್ಪರ್ಧಾರ್ಥಿ