Mar 12, 2008

ಕನ್ನಡ ನಾಡಿನ ಇತಿಹಾಸ

ಕರ್ನಾಟಕದ ಇತಿಹಾಸದ ದಾಖಲೆ ೨ ಸಾವಿರವರ್ಷಕ್ಕೂ ಹೆಚ್ಚಿನದು. ಹಲವು ಮಹಾ ಸಾಮ್ರಾಜ್ಯಗಳು ಹಾಗು ರಾಜವಂಶದವರು ಕರ್ನಾಟಕವನ್ನು ಆಳಿ ಇಲ್ಲಿಯ ಇತಿಹಾಸ, ಸಂಸ್ಕೃತಿ ಹಾಗು ಬೆಳವಣಿಗೆಗೆ ಕಾರಣರಾಗಿದ್ದಾರೆ.

ಕರ್ನಾಟಕ ಮೂಲದ ಸಾಮ್ರಾಜ್ಯಗಳ ಪ್ರಭಾವ ಭಾರತದ ಎಲ್ಲ ಭಾಗಳಲ್ಲೂ ಕಂಡುಬರುತದೆ. ಬಂಗಾಳದ ಸೇನ ರಾಜವಂಶ ತಮ್ಮನ್ನು ಕರ್ನಾಟ ಕ್ಷತ್ರಿಯ ಗಳೆಂದು ಕರೆದುಕೊಳ್ಳುತಿದ್ದರು,ಮಿಥಿಲಯಾ ಕರ್ನಾಟ ಕರು ಇಂದಿನ ಬಿಹಾರದಮೇಲೆ ರಾಜ್ಯ ಅಳುತಿದ್ದರು ಅವರು ಕೂಡ ತಮ್ಮನು ತಾವುಕರ್ನಾಟ ವಂಶ ಹಾಗು ಕರ್ನಾಟಕ ಕ್ಷತ್ರಿಯ ರೆಂದು ಕರೆದುಕೊಳ್ಳುತಿದ್ದರು. ಮದ್ಯ ಭಾರತದ ಚಿಂದಕ ನಾಗರು, ಕಳಿಂಗದ ಗಂಗರು (ಒರಿಸ್ಸಾ), ಮಾನ್ಯಖೇಟದ ರಾಷ್ಟ್ರಕೂಟರು, ವೆಂಗಿ ಚಾಲುಕ್ಯರು, ದೇವಗಿರಿಯ ಯಾದವ ವಂಶ ಇವರೆಲ್ಲರೂ ಕನ್ನಡ ಮೂಲದವರೇ ಆದರೂ ಕ್ರಮೇಣ ಪ್ರಾದೇಶಿಕ ಭಾಷೆಗಳನ್ನು ಪ್ರೋತ್ಸಾಹಿಸಿದರು.



ಇತಿಹಾಸ-ಪೂರ್ವ
ಕರ್ನಾಟಕದ ಇತಿಹಾಸ ಪೂರ್ವದ ವಿಸ್ತಾರವಾದ ಅಧ್ಯಯನ ಮಾಡಿದ ಹೆಗ್ಗಳಿಕೆ ರೋಬೇರ್ತ್ ಬ್ರೂಸ್-ಫೂಟೇ ಅವರದು, ಇವರ ಈ ಕಾರ್ಯವನ್ನು ನಂತರ ಬೇರೆ ವಿದ್ವಾಂಸರು ಮುಂದುವರಿಸಿದರು. ಕರ್ನಾಟಕ (ಹಾಗು ಸಾಮಾನ್ಯವಾಗಿ ದಕ್ಷಿಣ ಭಾರತದ) ಇತಿಹಾಸ ಪೂರ್ವ ಸಂಸ್ಕೃತಿಯನ್ನು ಕೈ-ಕೊಡಲಿ(hand-axe) ಸಂಸ್ಕೃತಿಯೆಂದು ಕರೆಯಲಾಗುತದ್ದೆ, ಉತ್ತರ ಭಾರತದ ಸಂಸ್ಕೃತಿಯನ್ನು ಸೋಹನ್ ಸಂಸ್ಕೃತಿಯೆನ್ನಲಾಗುತದೆ.. ಪೂರ್ವಶಿಲಾಯುಗದ ಬೆಣಚಿಯ ಉರುಳುಗಲ್ಲು ಆಕಾರದ ಕೈ ಕೊಡಲಿ ಹಾಗು ತಡಕತ್ತಿ ಚಿಕ್ಕಮಗಳೂರುನ ಲಿಂಗದಹಳ್ಳಿ ಹಾಗು ಗುಲ್ಬರ್ಗದ ಹುಣಸಿಗಿ ಯಲ್ಲಿ ಕೊಂಡುಬಂದಿದೆ, ಹಾಗು ತುಮಕೂರಿನ ಕಿಬ್ಬನಹಳ್ಳಿಯಲ್ಲಿ ಮರದ ಕತ್ತಿ ಸಿಕ್ಕಿರುವುದು ಹಳೆ ಕಲ್ಲು ಯುಗದ ಸಾಮಗ್ರಿಯ ಉದಾಹರಣೆಗಳು. ರಾಯಚೂರಿನ ಲಿಂಗಸೂಗೂರಿನಲ್ಲಿ ನುಣುಪಾದ ಕಲ್ಲು ಕೊಡಲಿ ಸಿಕ್ಕಿರುವ ವರದಿ ಕೂಡ ಬಂದಿದೆ. ಹೊಸ ಶಿಲಾಯುಗದ ಉದಾಹರಣೆ.  ರಾಯಚೂರು ಜಿಲ್ಲೆಯ ಮಸ್ಕಿ, ಚಿತ್ರದುರ್ಗ ಜಿಲ್ಲೆಯ ಬ್ರಹ್ಮಗಿರಿ ಮುಂತಾದವು, ಮನುಷ್ಯ ಪ್ರಾಣಿಗಳನ್ನು (ಹಸು, ನಾಯಿ ಹಾಗು ಕುರಿ) ಪಳಗಿಸಲು ಆರಂಬಿಸಿರುವ ಹಾಗು ತಾಮ್ರದ ಹಾಗು ಕಂಚಿನ ಆಯುಧಗಳನ್ನು ಬಳಸಿರುವ ಮತ್ತು ಬಳೆ, ಉಂಗುರ, ಮಣಿಗಳ ಸರ ಹಾಗು ಕಿವಿ ಓಲೆ ಧರಿಸಿರುವದಕ್ಕೆ ಹಲವು ಪುರಾವೆಗಳು ಸಿಕ್ಕಿವೆ ಮತ್ತು ಸಮಾಧಿಗಳು ಕೂಡ ಕಂಡುಬಂದಿವೆ. ನವಶಿಲಾಯುಗ ಯುಗ ಕೊನೆಯಲ್ಲಿ, ಬೃಹತ್ ಶಿಲೆಯಯುಗದಲ್ಲಿ, ಕರ್ನಾಟಕದಲ್ಲಿ ಜನರು ಕಬ್ಬಿಣದ ಅಯುಧಗಳನ್ನು ದೊಡ್ಡ ಖಡ್ಗಗಳು, ಕುಡುಗೋಲು, ಕೊಡಲಿ, ಸುತ್ತಿಗೆ, ತೆನೆ, ಉಳಿ ಹಾಗು ಬಾಣಗಳನ್ನು ಉಪಯೋಗಿಸಲು ಆರಂಬಿಸಿದರು.
ಪಾಂಡಿತ್ಯಪೂರ್ಣ ಸಿದ್ಧಾಂತ ಊಹೆಪ್ರಕಾರ ೩೦೦೦ ಕ್ರಿ.ಪೂ ದಲ್ಲೇ ಹರಪ್ಪದ ಸಿಂಧೂ ಕಣಿವೆ ನಗರಗಳು ಹಾಗು ಲೋಥಾಲ್ನ ನಡುವೆ ಸಂಪರ್ಕ ಇರುವುದಾಗಿ ಹಾಗು ಇದಕ್ಕೆ ಪುರಾವೆ ಹರಪ್ಪದ ತಾಣಗಳಲ್ಲಿ ಸಿಕ್ಕಿರುವ ಬಂಗಾರ ಕರ್ನಾಟಕದ ಗಣಿಗಳಿಂದ ತರಿಸಲ್ಪಟ್ಟಿತು ಎನ್ನಲಾಗುತ್ತದೆ.

ಆಧುನಿಕ ಕರ್ನಾಟಕದಲ್ಲಿ ನವಶಿಲಾಯುಗ ವಸತಿಯಿದ್ದ ಹಾಗು ಕ್ರಿ.ಪೂ ೨ನೆಯ ಶತಮಾನದ ಪ್ರಾಚೀನ ಕಾಲದ ಕಲ್ಲಿನ ಅಥವಾ ಲೋಹದ ಆಯುಧಗಳನ್ನೂ ಮೊದಲಿಗೆ ೧೮೭೨ರಲ್ಲಿ ಶೋಧಿಸಲಾಯಿತು. ವರದಿಗಳ ಪ್ರಕಾರ ಕಲ್ಲು ಕೊಡಲಿಯನ್ನು ರೈಚುರು ಜಿಲ್ಲೆಯಾ ಲಿಂಗ್ಸುಗುರ್ನಲ್ಲಿ ಸಿಕಿವೆ; ಆದರೆ ಇ ವರದಿಯನ್ನು ಕಚಿತ ಪಡಿಸಲು ಇನ್ನು ಆಗಿಲ.ಬೃಹತ್ ಶಿಲೆಯ ರಚನೆಗಳು ಹಾಗು ಸಮಾದಿಗಳನ್ನೂ ೧೮೬೨ರಲ್ಲಿ ಕೊಡಗು ಹಾಗು ಮೂರೆಯ್ ಬೆಟ್ಟದಲ್ಲಿ ಶೋದಿಸಲಾಗಿದೆ, ಆಗೆಯೇನವಶಿಲಾಯುಗದ ತಾಣಗಳು ಉತ್ತರ ಕರ್ನಾಟಕದಲ್ಲಿ ಸಿಕ್ಕಿವೆ.

ಸೋಮನಾಥಪುರ
ಆರಂಭಿಕ ಇತಿಹಾಸ

    ಮುಖ್ಯ ಲೇಖನಗಳು: ಶಾತವಾಹನರು ಮತ್ತು ಕದಂಬರು

ವರ್ತುಲವಾಗಿ ಕ್ರಿ.ಪೂ ೨೩೦ ರಲ್ಲಿ , ಶಾತವಾಹನ ರಾಜಮನೆತನಅಧಿಕಾರಕ್ಕೆ ಬಂದರುಹಾಗು ಅವರ ಆಳ್ವಿಕೆ ಸರಿ ಸುಮಾರು ನಾಲ್ಕು ಶತಮಗಳವರೆಗೆ ನಡೆಯಿತು,೩ನೆಯ ಶತಮಾನದವರಗೆ. ಶಾತವಾಹನ ರಾಜಮನೆತನದ ವಿಯೋಜನೆ ಇಂದಾಗಿ ಮೊಟ್ಟ ಮೊದಲ ಸ್ಥಳೀಯ ಸಾಮ್ರಾಜ್ಯ ಬನವಾಸಿಯ ಕದಂಬ ರಾಜಮನೆತನದ ಆಧುನಿಕ ಉತ್ತರ ಕನ್ನಡ ಜಿಲ್ಲೆಯಲ್ಲಿ ತಲೆದೋರಿತು, ಇದರ ಸ್ಥಾಪಕ ಇಂದಿನ ಶಿವಮೊಗ್ಗ ಜಿಲ್ಲೆಯಾ ತಾಳಗುಂದದ ಸ್ಥಳೀಯ ಬ್ರಾಹ್ಮಣ ಮಯೂರಶರ್ಮ,  ಹಾಗು ಪಶ್ಚಿಮ ಗಂಗಾ ರಾಜಮನೆತನ ದಕ್ಷಿಣ ಕರ್ನಾಟಕದಲ್ಲಿ ತನ್ನ ರಾಜ್ಯವು ಆರಂಬವಾಯಿತು ,ಈ ಘಟನೆಗಳು ಇಲ್ಲಿಯ ಪ್ರದೇಶ ಸ್ವಾಧಿಪತ್ಯದ ರಾಜಕೀಯದ ಅಸ್ತಿತ್ವಕ್ಕೆ ನಾಂದಿ ಹಾಡಿದವು. ಇವುಗಳು ಕನ್ನಡ ಭಾಷೆಗೆ ಆಡಳಿತ ದರ್ಜೆ ಕೊಟ್ಟ ಮೊದಲ ಸಾಮ್ರಾಜ್ಯಗಳು, ಇದಕ್ಕೆ ಪುರಾವೆಯಾಗಿ ೪೫೦ರ ಹಲ್ಮಿಡಿ ಬರೆಹಗಳಿವೆ, ಇದನ್ನು ಕದಂಬ ರಾಜಮನೆತನದ ರಾಜ ಕಾಕುಸ್ಥವರ್ಮನಗೆ ಸಮರ್ಪಿಸಲಾಗಿದೆ . ಅಗೆಯೇ, ಇತೀಚೆಗೆ ೫ನೆಯ ಶತಮಾನದ ತಾಮ್ರದ ನಾಣ್ಯ ಕದಂಬರ ರಾಜಧಾನಿ ಬನವಾಸಿಯಲ್ಲಿ ಸಿಕ್ಕಿವೆ, ಇದರಮೆಲ್ಲೇ ಕನ್ನಡ ಲಿಪಿ ಬರಹ ಇದೆ, ಇದು ಕನ್ನಡ ಭಾಷೆ ಆಡಳಿತವಾಗಿ ಬಲಿಸುತಿದಕ್ಕೆ ಪುರಾವೆಯಾಗಿವೆ. ಮಧ್ಯಯುಗದ ಇತಿಹಾಸ

ಮಧ್ಯಯುಗದ ಇತಿಹಾಸ

ಮುಖ್ಯ ಲೇಖನಗಳು: ಚಾಲುಕ್ಯರು, ರಾಷ್ಟ್ರಕೂಟರು, ಪಶ್ಚಿಮ ಚಾಲುಕ್ಯರು, ಹೊಯ್ಸಳ, ಪಶ್ಚಿಮ ಗಂಗರು, ಮತ್ತು ವಿಜಯನಗರ ಸಾಮ್ರಾಜ್ಯ

ನಂತರ ದೊಡ್ಡ ಸಾರ್ವಭೌಮ ಸಾಮ್ರಾಜ್ಯಗಳು ಆಳ್ವಿಕೆ ಮಾಡಿದವು, ಇದರಲ್ಲಿ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟ ರಾಜಮನೆತನ ಹಾಗು ಪಶ್ಚಿಮ ಚಾಲುಕ್ಯ ಸಾಮ್ರಾಜ್ಯಸೇರಿವೆ, ಇವುಗಳ ವೈಭವದಿಂದ ಕೂಡಿದ ರಾಜಧಾನಿಗಳು ಆಧುನಿಕ ಕರ್ನಾಟಕ ಪ್ರದೇಶದಲ್ಲಿವೆ ಹಾಗು ಇವರು ಕನ್ನಡ ಭಾಷೆ ಹಾಗು ಸಾಹಿತ್ಯವನ್ನು ಪೋಷಿಸಿದರು.

ಕರ್ನಾಟಕದ ಮಲೆನಾಡುವಿನ ಸ್ಥಲಿಯರಾದ, ಹೊಯ್ಸಳರು ಹೊಯ್ಸಳ ಸಾಮ್ರಾಜ್ಯವನ್ನು ಸಹಸ್ರವರ್ಷದ ತಿರುವಿನಲ್ಲಿ ಸ್ತಾಪಿಸಿದರು. ಈ ಸಮಯದಲ್ಲಿ ಈ ಸ್ಥಳದಲ್ಲಿ ಕಲೆ ಹಾಗು ವಾಸ್ತುಕಲೆ ಪ್ರವರ್ಧಮಾನಕ್ಕೆ ಬಂದವು, ಇದರಿಂದಾಗಿ ಪ್ರತ್ಯೇಕವಾದ ಕನ್ನಡ ಸಾಯಿತ್ಯ ನಾಂದಿ ಹಾಡಿತು ಹಾಗು ವಿಶಿಷ್ಟವಾದ ವೇಸರ ಕನುಗುಣವಾದ ದೇವಸ್ತನಗಳು ವಿನ್ಯಾಸಗಳು ಕಟ್ಟಲ್ಪಟವು.ಹೊಯ್ಸಳ ಸಾಮ್ರಾಜ್ಯದ ವಿಸ್ತರಣದಿಂದಾಗಿ ಅಧುನಿಕ ಆಂಧ್ರಪ್ರದೇಶ ಹಾಗು ತಮಿಳು ನಾಡು ಹಲವು ಬಾಗಗಳು ಆವರ ಆಳ್ವಿಕೆಯಲ್ಲಿ ಬಂದವು.

೧೪ನೆಯ ಶತಮಾನ ಆರಂಭಿಕ ವರ್ಷಗಳಲ್ಲಿ, ವಿಜಯನಗರ ಸಾಮ್ರಾಜ್ಯ ಅದರ ರಾಜಧಾನಿ ಹೊಸಪಟ್ಟಣ (ನಂತರ ವಿಜಯನಗರಎಂದು ಕರೆಯಲ್ಪಟ್ಟ) ದಕ್ಷಿಣದಲ್ಲಿ ಮುಸ್ಲಿಮ ಆಕ್ರಮಣ ಎಶಸ್ವಿಯಾಗಿ ಸದೆಬಡೆದರು. ಈ ಸಾಮ್ರಾಜ್ಯದ ಸ್ತಾಪಕರು ಹರಿಹರ ಹಾಗು ಬುಕ್ಕ ರಾಯ ಇವರನ್ನು ಹಲವು ಚರಿತ್ರಕಾರರು ಕೊನೆಯ ಹೊಯ್ಸಳ ರಾಜನ ವೀರ ಬಲ್ಲಾಳ ೩ ಸೇನಾಧಿಪತಿಗಳು ಎನ್ನುತಾರೆ ಹಾಗು ಇ ಸಾಮ್ರಾಜ್ಯ ಎರಡು ಶತಮಾನಗಳಿಗಿಂತ ಎಚ್ಚು ಸಮಯ ಸಂರಾಯ ಆಳಿದರು. ಬೀದರ್ನ ಬಹಮನಿ ಸುಲ್ತಾನರು,ವಿಜಯನಗರ ಸಾಮ್ರಾಜ್ಯದ ಮುಕ್ಯ ಶತ್ರುಗಲಾಗಿದರು ಆಗು ವಿಜನತರ ಸಾಮ್ರಾಜ್ಯ ಬಿದ್ದ ನಂತರ ಅವರು ಮುಖ್ಯ ಸ್ತಾನ ಗಳಿಸಿದರು, ಬಿಜಾಪುರದ ಸುಲ್ತಾನರು ದಕ್ಷಿಣ ಭಾರತದ ಆಳ್ವಿಕೆಗೆ ಹೊಡೆದಾಡಲು ಆರಂಬಿಸಿದರು. ಸುಲ್ತನಗಳ ಮೈತ್ರಿಯಾ ವಿರುಧ ೧೫೬೫ನಲ್ಲಿ ತಾಳಿಕೋಟ ಯುದದಲ್ಲಿ ವಿಜಯನಗರ ಸಾಮ್ರಾಜ್ಯದ ಸೋಲು ಹಾಗು ವಿಯೋಜನೆದ ನಂತರ, ಬಿಜಾಪುರ ಸುಲ್ತಾನರು ಮುಕ್ಯ ಶಕ್ತಿಯಾಗಿ ಹೊಮ್ಮಿದರು ಕೊನೆಗೆ ಅವರು ಮೊಗುಲ್ ಸಾಮ್ರಾಜ್ಯಕ್ಕೆ ೧೭ನೆಯ ಶತಮದಲ್ಲಿ ಸೋತರು. ಬಹಮನಿ ಹಾಗು ಬಿಜಾಪುರ ಆಡಳಿತಗಾರರು ಉರ್ದು ಹಾಗು ಪೆರ್ಸಿಯನ್ ಸಾಯಿತ್ಯ ಹಾಗು ಭಾರತೀಯ ಹಾಗು ಅರೆಬ್ಬಿಯವನು ಯಾ ಮುಸಲ್ಮಾನರ ವಾಸ್ತುಶಾಸ್ತ್ರಕ್ಕೆ ಪ್ರೋತ್ಸಾಹಿಸಿದರು, ಗೋಲ್ ಗುಂಬಜ್ ಇದರ ಒಂದು ಮುಖ್ಯ ಕೊಡುಗೆ.

ಆಧುನಿಕ ಇತಿಹಾಸ

ಒಡೆಯರ್ ಮತ್ತು ಟಿಪ್ಪು ಸುಲ್ತಾನ,  
ಮೈಸೂರು ಅರಮನೆ

ಮೈಸೂರಿನ ಒಡೆಯರ್ಗಳು, ಹಿಂದಿನ ವಿಜಯನಗರ ಸಾಮ್ರಾಜ್ಯದ ಹಿಡುವಳಿದಾರರು, ರಾಜ್ಯವನ್ನು ಮುಘಲ್ ರಾಜ ಔರಂಗಜೇಬ್‌ಇನಿಂದ ೧೫ನೆಯ ಶತಮಾನದಲ್ಲಿ ಗುತ್ತಿಗೆ ಪಡೆದರು. ಇಮ್ಮಡಿ ಕೃಷ್ಣರಾಜ ಒಡೆಯರ್ರ ಮರಣದ ನಂತರ , ಹೈದೆರ್ ಅಲಿ, ಮೈಸೂರು ಸೇನೆಯಾ ಮಹಾದಂಡ ನಾಯಕ, ಪ್ರಾಂತಡ ಅಧಿಕಾರವನ್ನು ವಹಿಸಿಕೊಂಡ, ಹೈದೆರ್ ಅಲಿಯಾ ಮರಣದ ನಂತರ ಆಳ್ವಿಕೆ ಅವನ ಪುತ್ರ ಟೀಪು ಸುಲ್ತಾನ್ಗೆ ಸಿಕ್ಕಿತು. ಮೈಸೂರಿನ ಹುಲಿ ಎಂದೇ ಪ್ರಕ್ಯತವಾದ ಟೀಪು ಸುಲ್ತಾನ್, ದಕ್ಷಿಣ ಭಾರತದಲ್ಲಿ ಯುರೋಪೆಯನ್ ವಿಸ್ತರಣೆ ತಡೆಗಟಲು , ನಾಲ್ಕು ಯುದಗಳನ್ನು ಮಾಡಿದ ಅಂಗ್ಲೋ-ಮೈಸೂರು ಯುಧಗಳು, ಕೊನೆಯದರಲ್ಲಿ ಅವನು ಮರಣವನೋಪ್ಪಿದ ಹಾಗು ಮೈಸೂರು ರಾಜ್ಯ ಬ್ರಿಟಿಶ್ ರಾಜ್ಕ್ಕೆ ಏಕೀಕರಣವಾಯಿತು.
 ಕರ್ನಾಟಕ ಏಕೀಕರಣ

    ಕರ್ನಾಟಕದ ಏಕೀಕರಣ

ಸ್ವಾತಂತ್ರದ ನಂತರ, ಒಡೆಯರ್ ಮಹಾರಾಜ ಭಾರತದ ಭಾಗವಾಗಲು ಸಮ್ಮತಿಸಿದರು. ೧೯೫೦ರಲ್ಲಿ , ಮೈಸೂರು ಭಾರತದ ರಾಜ್ಯವಾಯಿತು, ಹಾಗು ಪೂರ್ವ ಮಹಾರಾಜ ೧೯೭೫ರ ವರಗೆ ಅದರ ರಾಜಪ್ರಮುಖ , ಅಥವಾ ರಾಜ್ಯಪಾಲರಾದರು. ''ಏಕೀಕರಣ'' ಚಳುವಳಿ ೧೯ನೆಯ ಶತಮಾನಡ ಎರಡನೇ ಭಾಗದಲ್ಲಿ ಶುರ್ವಾಗಿ ೧೯೫೬ ರಾಜ್ಯ ಪುನಸ್ಸಂಘಟನೆ ಕಾಯಿದೆ ಯೊಂದಿಗೆ ಮುಕ್ತಾಯವಾಯಿತು, ಇದರಿಂದ ಕೂರ್ಗ್, ಮದ್ರಾಸ್, ಹೈದರಾಬಾದ್, ಹಾಗು ಬಾಂಬೆ ರಾಜ್ಯದ ಭಾಗಗಳನ್ನು ಮೈಸೂರು ರಾಜ್ಯಕ್ಕೆ ಸೇರ್ಪಡಿಸಲಾಯಿತು. ಮೈಸೂರು ರಾಜ್ಯವನ್ನು ಕರ್ನಾಟಕ ಎಂದು ೧೯೭೩ರಲ್ಲಿ ಪುನರ್ನಾಮಕರಣ ಮಾಡಲಾಯಿತು. ಮೈಸೂರು ರಾಜ್ಯವನ್ನು ನವೆಂಬರ್ ೧, ೧೯೫೬ರಲ್ಲಿ ರಚನೆಯಾಯಿತು ಅಂದಿನಿಂದ ನವೆಂಬರ್ ೧ ನ್ನು ಕನ್ನಡ ರಾಜ್ಯೋತ್ಸವ / ಕರ್ನಾಟಕ ರಾಜ್ಯೋತ್ಸವವಾಗಿ ಆಚರಿಸಲಾಗುತ್ತದೆ.