Dec 1, 2016

ನನ್ನ ಭಾರತ ಶ್ರೇಷ್ಠ ಭಾರತ

ಸೌರ ಮಂಡಲದಲ್ಲಿ ಎಂಟು ಗ್ರಹಗಳಿವೆ. ಆ ಎಂಟು ಗ್ರಹಗಳಲ್ಲಿ  ಭೂಮಿಯೇ ವಿಶೇಷವಾದ ಗ್ರಹ. ನಮ್ಮ ಭೂಮಿಯಲ್ಲಿ ಸಪ್ತ ಖಂಡಗಳಿವೆ. ಆ ಸಪ್ತ ಖಂಡಗಳಲ್ಲಿ ಏಷ್ಯ ಖಂಡ ಒಂದು. ಏಷ್ಯ ಖಂಡದಲ್ಲಿ ವಿಶೇಷವಾಗಿ ವಿಶಿಷ್ಟ ರೀತಿಯಲ್ಲಿ ನಿಂತಿರುವ್ ದೇಶವೇ ಭಾರತ. 

ಭಾರತ ಸುಂದರವಾದ ದೇಶ. ಯಾವ ದೇಶದವರಿಗಾದರು ಇಷ್ಟವಾಗುದೆ ಇರದು. ಭಾರತ ಪೂರ್ವ ಕಾಲದಿಂದಲು ತನ್ನದೆ ಆದ ರೀತಿಯಲ್ಲಿ ಬೆಳೆಯುತ್ತಾ ಬಂದಿದೆ. ಜಗ ತ್ತಿಗೆ ಸಾವಿರಾರು ಕೊಡುಗೆಗಳನ್ನು ನೀಡಿದೆ.ಭಾರತದ ಸಾವಿರಾರು ರಾಜಮಹಾರಾಜರುಗಳು ಒಬ್ಬರಿಗಿಂತ ಒಬ್ಬರು ಎಂಬಂತೆ ದೇಶ ಸೇವೆ ಮಾಡಿದ್ದರೆ.ಅನೇಕ ಕಾವ್ಯ ಶಾಸ್ತ್ರಗಳಿಗೆ ಜನ್ಮ ಸ್ಥಳ ಭಾರತ. ದೈವ ಭಾಷೆಯಾದ ಸಂಸ್ಕೃತದ ತವರೂರು ಭಾರತ.ಮಹಾಭಾರತ,ರಾಮಾಯಣ,ವೇದಗಳ ತವರು ಭಾರತ. ಮಸಾಲೆ ಪದಾರ್ಥಗಳಾದ ಮೆಣಸು ಇತ್ಯಾದಿಗಳ ಬೆಳೆಯಲು ಪ್ರಾರಂಭಿಸಿದ್ದು ಭಾರತದಲ್ಲಿಯೆ.ರೇಖಗಣಿತವು ನಮ್ಮ ಭಾರತದಲ್ಲಿ ಬಹಳ ಪ್ರಾಚೀನದಿಂದಲೆ ಇದೆ ಎಂಬುದಕ್ಕೆ ಉದಾಹರಣಿ ಹೋಮ ಕುಂಡಗಲನ್ನು ಜೊಡ್ಡಿಸುತ್ತಿದದ್ದು.ಅಂಕಗಣಿತಕ್ಕೆ ಶುನ್ಯವನ್ನು ಕೊಟ್ಟು ಅದನ್ನು ಮುಂದುವರಿಸಿದವರು ಭಾರತೀಯರು.ಬೀಜಗಣಿತದಲ್ಲು ಭಾರತಿಯರ ಮಹತ್ವದ ಕೊಡುಗೆ ಇದೆ. ಹೀಗೆ ಗಣಿತದಲ್ಲಿ ಭಾರತೀಯರ ಕೊಡುಗೆಯನ್ನು ಬರೆಯುತ್ತ ಹೋದರೆ ಸಾವಿರ ಉದಾಹರಣೆಯನ್ನು ಕೊಡಬಹುದು.ಭಾರತೀಯರು ಬುದ್ದಿವಂತರು,ಪೂರ್ವಕಲದಲ್ಲಿಯೇ ನಾವು ಅನೇಕ ವಿಷಯಗಳನ್ನು ಸಂಶೋಧಿಸಿದ್ದೆವು.ಉದಾಹರಣೆಗೆ ವೈದ್ಯಕೀಯ ಕ್ಷೇತ್ರದಲ್ಲಿ ನೊಡಿದರೆ ಶಸ್ತ್ರಚಿಕಿತ್ಸೆಯನ್ನು ಮೊದಲು ಪ್ರರಂಬಿಸಿದ್ದು ಭಾರತೀಯನಾದ ಶುಶ್ರುತ.ಆಯುರ್ವೇದವನ್ನು ಜಗತ್ತಿಗೆ ನೀಡಿದವರು ಭಾರತೀಯರು. ಆಯುರ್ವೇದ ಅತ್ಯಂತ ಪ್ರಾಚಿನವದದ್ದು,ಅಂದರೆ ಎಲ್ಲಾ ವೈದ್ಯಕೀಯ ಪ್ರಭೇದಗಳಿಗಿಂತಲು ಹಿಂದಿನದ್ದು.ಇದರಿಂದ ವೈದ್ಯಕೀಯ ಕ್ಷೆತ್ರಕ್ಕೆ ಭಾರತಿಯರು ಹೆಚ್ಚು ಒತ್ತು ನೀಡಿದವರು ಎಂಬುದನ್ನು ತಿಳಿಯಬಹುದು.ಅನೇಕ ರೋಗಗಳಿಗೆ ರಾಮಬಾಣದಂತಿರುವ ಅರಿಶಿಣವನ್ನು ಜಗತ್ತಿಗೆ ಪರಿಚಯಿಸಿದ್ದು ಭಾರತಿಯರು. ವಿಗ್ನಾನ ಕ್ಷೇತ್ರದಲ್ಲಿ ಭರತೀಯರ ಪ್ರಗತಿಯನ್ನು ನೋಡಬೇಕಾದರೆ ನೋಡಬೇಕಾದರೆ ನಮ್ಮ ದೇವಸ್ತಾನದ ಉದಹರನೆಯನ್ನು ತೆಗೆದು ಕೊೞಬಹುದು.ಭಾರತ ಯಾವ ಕ್ಷೇತ್ರದಲ್ಲಿ ತನ್ನ ಕೊಡುಗೆಯನ್ನು ನೀಡಿಲ್ಲ?ಭರತ ಎಲ್ಲಾ ದೇಶಗಳಿಗಿಂತ ವಿಭಿನ್ನವಾದದ್ದು.ಆದ್ದರಿಂದಲೇ ಅಲೆಕ್ಸಾಂಡರ್ ನ ವಲವು ಭಾರತದೆಡೆಗೆ ಮೂಡ್ಡಿದ್ದು.ಯುರೋಪನವರಿಗೂ ಸಹ ಭಾರತದ ಮೇಲೆ ಕುತೂಹಲ ಹೆಚ್ಚಾಗಿತ್ತು.ನಮ್ಮ ಯವೂದರಲ್ಲೂ ಕಮ್ಮಿ ಇಲ್ಲ,ಆದರೂ ಸಹ ಯಾಕೆ ಇಂದು ನಾವು ಬೇರೆ ದೇಶದ ಕಡೆಗೆ ಮುಖ ಮಾಡಿ ನೋಡುತ್ತಿದೇವೆ? ಮುತ್ತು ರತ್ನಗಳನ್ನು ಬೀದಿಯಲ್ಲಿ ಮಾರುತ್ತಿದ್ದ ನಮ್ಮ ದೇಶ ಯಾಕೆ ಇಂದು ಆರ್ತಿಕ ಬಿಕಟ್ಟು ಅನುಭವಿಸುತ್ತಿದೆ ಇದಕ್ಕೆ ಕಾರಣ ನಮ್ಮ ದೇಶದ ಬುದ್ದಿವಂತ ಪ್ರಜೆಗಲು ಬೇರೆ ದೇಶಕ್ಕೆ ಹಾರತ್ತಿರುವುದು.ಉತ್ತಮ ಅವಕಾಶಗಳು ಸಿಗದಿವುದು ಇದಕ್ಕೆ ಕರಣವಾಗಿರಬಹುದು.ಆದ್ದರಿಂದ ನಮ್ಮ ಸರ್ಕಾರ ಉತ್ತಮ ಅವಕಾಶಗಳನ್ನು ಒದಗಿಸಬೇಕು.ಈ ನಿಟ್ಟಿನಲ್ಲಿ ನಮ್ಮ ಪ್ರಾಧಾನಿ ನರೇಂದ್ರ ಮೋದಿಯವರ ಹೆಜ್ಜೆಗಳು ಪ್ರಶಂಶನೀಯ.ನಾವೇಲ್ಲರು ನಮ್ಮಲ್ಲಿ ರಾಷ್ಟ್ರಪ್ರೇಮ ರಾಷ್ಟ್ರಭಕ್ತಿಯನ್ನು ನಮ್ಮಲ್ಲಿ ಬೆಳಸಿಕೊೞಬೇಕು.ನಾವೆಲ್ಲರು ಒಂದಾಗಬೇಕು.ಭಾರತವನ್ನು ಮುಂದುವರಿಸಬೇಕು.ಭಾರತವನ್ನು ಉತುಂಗಕ್ಕೆ ಕೊಂಡ್ಯೊಯಬೇಕು.ವಂದೇ ಭಾರತ ಮಾತರಂ.ಜೈ ಭಾರತ ಮಾತೆ.