Mar 15, 2014

ಪ್ರವಾಸೋದ್ಯಮ - ಚನ್ನಪಟ್ಟಣ

ಪ್ರವಾಸೋದ್ಯಮದ ಬಗ್ಗೆ ಸಂಕ್ಷಿಪ್ತ ಪರಿಚಯ:

       ಚನ್ನಪಟ್ಟಣ ನಗರವು ಬೆಂಗಳೂರಿನಿಂದ ಸುಮಾರು 50 ಕಿ.ಮೀ ಗಳ ಅಂತರದಲ್ಲಿರುತ್ತದೆ. ಚನ್ನಪಟ್ಟಣ ನಗರವು ಗೊಂಬೆಗಳ ನಗರವೆಂದು ಪ್ರಸಿದ್ಧಿಯೊಂದಿದ್ದು, ಮರದ ಗೊಂಬೆಗಳ ತಯಾರಿಕೆ ಮತ್ತು ಕರಕುಶಲತೆಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಮಾರುಕಟ್ಟೆಯನ್ನು ಹೊಂದಿದೆ.
    ಚನ್ನಪಟ್ಟಣ ನಗರವನ್ನು ಮೊಟ್ಟ ಮೊದಲ ಬಾರಿಗೆ ತಿಮ್ಮಪ್ಪ ರಾಜ ಅರಸು ನಂತರ ಜಗದೇವರಾಜ್ ರವರು ತಮ್ಮ ಆಳ್ವಿಕೆಯನ್ನು ನಡೆಸಿದರು ನಂತರ ಚನ್ನಪಟ್ಟಣವನ್ನು ತಮ್ಮ ರಾಜಧಾನಿಯನ್ನಾಗಿ ಮಾಡಿ ಆಳ್ವಿಕೆ ನಡೆಸಿದ್ದರು.
ಈ ಕೆಳಕಂಡ ಸ್ಥಳಗಳು ಚನ್ನಪಟ್ಟಣ ನಗರದ ಸಮೀಪದಲ್ಲಿರುವ ಪ್ರಸಿದ್ಧ ಪ್ರವಾಸಿ ಸ್ಥಳಗಳಾಗಿವೆ.
1)      ಕಣ್ವ ಮಹರ್ಷಿ ಮಠ ಮತ್ತು ಬ್ರಾಹ್ಮಣ್ಯ ತೀರ್ಥರ ಬೃಂದಾವನ ಅಬ್ಬೂರು.
2)      ಕಣ್ವ ಜಲಾಶಯ         
3)       ಮಳೂರು ಅಪ್ರಮೇಯ ಸ್ವಾಮಿ ದೇವಸ್ಥಾನ, ದೊಡ್ಡಮಳೂರು.
4)       ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನ.
5)       ಇಗ್ಗಲೂರು ಅಣೆಕಟ್ಟೆ
6)       ಬೆಟ್ಟದ ತಿಮ್ಮಪ್ಪ ಬೇವೂರು.
ತಲುಪುವ ಮಾರ್ಗ
1)      ಕಣ್ವ ಮಹರ್ಷಿ ಮಠ ಮತ್ತು ಬ್ರಾಹ್ಮಣ್ಯ ತೀರ್ಥರ ಬೃಂದಾವನವು ಚನ್ನಪಟ್ಟಣ ನಗರದ ಕಣ್ವ ಜಲಾಶಯದಿಂದ 6 ಕಿ.ಮೀ ದೂರದಲ್ಲಿದೆ.
2)      ಕಣ್ವ ಜಲಾಶಯ ಚನ್ನಪಟ್ಟಣದಿಂದ 13 ಕಿ.ಮೀ ದೂರದಲ್ಲಿದೆ.
3)       ಮಳೂರು ಅಪ್ರಮೇಯ ಸ್ವಾಮಿ ದೇವಸ್ಥಾನವು ಚನ್ನಪಟ್ಟಣದಿಂದ 2 ಕಿ.ಮೀ ದೂರದಲ್ಲಿದ್ದು ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯ ನಡೆವೆಯಲ್ಲಿದೆ.
4)      ಕೆಂಗಲ್ ಆಂಜನೇಯ ಸ್ವಾಮಿ ದೇವಸ್ಥಾನವು ಬೆಂಗಳೂರಿನಿಂದ ಚನ್ನಪಟ್ಟಣಕ್ಕೆ ಬರುವ ಮಾರ್ಗದಲ್ಲಿದ್ದು, ಬೆಂಗಳೂರು ಮತ್ತು ಮೈಸೂರು ಹೆದ್ದಾರಿಯ ಬಳಿಯಿರುತ್ತದೆ.
5)      ಇಗ್ಗಲೂರು ಅಣೆಕಟ್ಟೆಯು ಚನ್ನಪಟ್ಟಣದಿಂದ 20 ಕಿ.ಮೀ ದೂರದಲ್ಲಿದೆ. ಸಂತೆಮೊಗೇನಹಳ್ಳಿ ಮತ್ತು ಅಕ್ಕೂರು ಮಾರ್ಗದ ಲ್ಲಿದೆ.
6)  ಬೆಟ್ಟದ ತಿಮ್ಮಪ್ಪ ದೇವಸ್ಥಾನವು ಚನ್ನಪಟ್ಟಣದಿಂದ 13 ಕಿ.ಮೀ ದೂರದಲ್ಲಿದೆ. ನಿಡಸಾಲೆಗೆ ಹೋಗುವ ಮಾರ್ಗದಲ್ಲಿದೆ.